ಜಿ. ಬೇವಿನಹಳ್ಳಿಯಲ್ಲಿ ನೋಟ್‌ಬುಕ್ ವಿತರಣೆ

ಜಿ. ಬೇವಿನಹಳ್ಳಿಯಲ್ಲಿ ನೋಟ್‌ಬುಕ್ ವಿತರಣೆ

ಮಲೇಬೆನ್ನೂರು,ಜು.13- ಜಿ. ಬೇವಿನಹಳ್ಳಿ ಗ್ರಾಮದ  ಶ್ರೀ ಸಿದ್ದಲಿಂಗೇಶ್ವರ ಪ್ರೌಢಶಾಲಾ ಮಕ್ಕಳಿಗೆ ಬೆಂಗಳೂರಿನ ಪ್ರತಿಬಿಂಬ ಟ್ರಸ್ಟ್‌ನವರು ನೀಡಿದ ನೋಟ್ ಪುಸ್ತಕಗಳನ್ನು ಬುಧವಾರ ವಿತರಣೆ ಮಾಡಲಾಯಿತು.  ಶಾಲೆಯ ಮುಖ್ಯ ಶಿಕ್ಷಕ ಜಯಪ್ಪ, ನಂದಿತಾವರೆ ಶಾಲೆಯ ಮುಖ್ಯ ಶಿಕ್ಷಕ ಉಮೇಶ್, ಕೊಕ್ಕನೂರು ಶಾಲೆಯ ಶಿಕ್ಷಕ ಶ್ರೀಕಾಂತ್, ಬೇವಿನಹಳ್ಳಿ ಶಾಲೆಯ ಶಿಕ್ಷಕ ವಿಜಯಕುಮಾರ್ ಸೇರಿದಂತೆ ಶಾಲಾ ಸಿಬ್ಬಂದಿ ಮತ್ತು ಮಕ್ಕಳು ಈ ವೇಳೆ ಹಾಜರಿದ್ದರು.

error: Content is protected !!