ಗಾಂಧೀಜಿಯವರ ರಚನಾತ್ಮಕ ಕಾರ್ಯಕ್ರಮದ ತಳಹದಿಯ ಮೇಲೆ ಮಕ್ಕಳಿಗೆ ಶಿಕ್ಷಣ ನೀಡಬೇಕು

ಗಾಂಧೀಜಿಯವರ ರಚನಾತ್ಮಕ ಕಾರ್ಯಕ್ರಮದ ತಳಹದಿಯ ಮೇಲೆ ಮಕ್ಕಳಿಗೆ ಶಿಕ್ಷಣ ನೀಡಬೇಕು

ಭಾರತ ಸೇವಾದಳ ಜಿಲ್ಲಾಧ್ಯಕ್ಷ ಪ್ರೊ. ಚನ್ನಪ್ಪ ಕರೆ

ದಾವಣಗೆರೆ, ಜು. 12 – ವಿದ್ಯಾರ್ಥಿಗಳಿಗೆ ವಿಶೇಷವಾದ ಮತ್ತು ವಿನೂತನವಾದ ಶಿಕ್ಷಣವನ್ನು  ನೀಡುವುದಾದರೆ ಶಿಕ್ಷಕರಿಗೆ ಪುನಶ್ಚೇತನ ತರಬೇತಿಗಳ ಅಗತ್ಯತೆ ಇದೆ ಎಂದು ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷ ಪ್ರೊ. ಎಚ್. ಚನ್ನಪ್ಪ ಪಲ್ಲಾಗಟ್ಟೆ ಅಭಿಪ್ರಾಯ ಪಟ್ಟರು. 

ಭಾರತ ಸೇವಾದಳ ಭವನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರ ಸಹಯೋಗ ದಲ್ಲಿ ಇಂದು ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ಸೇವಾದಳ ತರಬೇತಿ ಪಡೆದ ಶಿಕ್ಷಕರ ಪುನಶ್ಚೇತನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಪ್ರತಿಯೊಬ್ಬ ಶಿಕ್ಷಕರು ಸೇವಾದ ಳದ ಉದ್ದೇಶಗಳನ್ನು ತಿಳಿದುಕೊಂಡು ಸೇವಾದಳದ ವಾರ್ಷಿಕ ಕೈಪಿಡಿಯಂತೆ ಮಹಾತ್ಮ ಗಾಂಧೀಜಿಯವರ ರಚನಾ ತ್ಮಕ ಕಾರ್ಯಕ್ರಮದ ತಳಹದಿಯ ಮೇಲೆ  ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕೆಂದು ಕರೆ ನೀಡಿದರು.

ಪ್ರಭಾರಿ ಜಿಲ್ಲಾ ದೈಹಿಕ ಶಿಕ್ಷಣಾ ಧಿಕಾರಿಗಳಾದ ಎನ್. ಮಂಜುಳಾ ಮಾತನಾಡಿ, ಪ್ರತಿಯೊಂದು ಶಾಲೆಗ ಳಲ್ಲೂ ಸೇವಾದಳ ಘಟಕವನ್ನು ಆರಂ ಭಿಸಬೇಕೆಂದು ಶಿಕ್ಷಕರಿಗೆ ತಿಳಿಸಿದರು. 

ಇದೇ ಸಂದರ್ಭದಲ್ಲಿ ಭಾರತ ಸೇವಾದಳದ ನೇತಾರ ದಿ.  ಮುನಿ ಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಗೌರವ ಸಮರ್ಪಣೆಯನ್ನು ಮಾಡಲಾಯಿತು. ನಿಟುವಳ್ಳಿ ಪ್ರೌಢಶಾಲೆಯ ಸೇವಾದಳ ವಿದ್ಯಾರ್ಥಿನಿ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಅವರಿಗೆ ಆರ್ಥಿಕ ಸಹಾಯ ಧನವನ್ನು ನೀಡಲಾಯಿತು.

ತಾಲ್ಲೂಕು ದೈಹಿಕ ಶಿಕ್ಷಣ ಪರೀ ಕ್ಷಕ ಹುಸೇನ್ ಪೀರ್, ಸೇವಾದಳ ತಾಲ್ಲೂಕು ಸಮಿತಿ ಉಪಾಧ್ಯಕ್ಷರಾದ ಕೆ. ಆರ್. ಸಿದ್ದೇಶಪ್ಪ, ತಾಲ್ಲೂಕು ಸೇವಾದಳ ಕೋಶ್ಯಾಧ್ಯಕ್ಷ ಎಸ್. ಎನ್. ರಮೇಶ್, ದೈಹಿಕ ಶಿಕ್ಷಣ ಸಂಘದ ಪದಾಧಿಕಾರಿಗಳಾದ ಗಣೇಶ್, ಶ್ರೀನಿವಾಸ್, ಸಂತೋಷ್, ಸತ್ಯನಾರಾಯಣ್ ಉಪಸ್ಥಿತರಿದ್ದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಅಧ್ಯಕ್ಷ ಹಾಸಬಾವಿ ಕರಿಬಸಪ್ಪ ವಹಿಸಿದ್ದರು.  ವಲಯ ಸಂಘಟಕರಾದ ಎಂ. ಅಣ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಆರ್. ಗೋಪಾಲಪ್ಪ ಸ್ವಾಗತಿಸಿ ದರು. ರಾಘವೇಂದ್ರ ವಂದಿಸಿದರು.

error: Content is protected !!