ಜಿಲ್ಲಾ ಕಸಾಪದಿಂದ ಎಸ್ಸೆಸ್ಸೆಂಗೆ ಸನ್ಮಾನ

ಜಿಲ್ಲಾ ಕಸಾಪದಿಂದ ಎಸ್ಸೆಸ್ಸೆಂಗೆ ಸನ್ಮಾನ

 ದಾವಣಗೆರೆ, ಜು. 12 – ಜಿಲ್ಲಾ ಉಸ್ತುವಾರಿ ಸಚಿವ   ಎಸ್. ಎಸ್. ಮಲ್ಲಿಕಾರ್ಜುನ್‌ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಅವರ ನೇತೃತ್ವದಲ್ಲಿ ಅವರ ನಿವಾಸದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅಭಿನಂದಿಸಲಾಯಿತು. 

ಇದೇ ಸಂದರ್ಭದಲ್ಲಿ ಮಾತನಾಡಿದ ವಾಮದೇವಪ್ಪ, ಈ ಹಿಂದೆ ನಿಗದಿಯಾಗಿದ್ದ ಮೂರನೇ ವಿಶ್ವ ಕನ್ನಡ ಸಮ್ಮೇಳನವನ್ನು ದಾವಣಗೆರೆ ನಗರದಲ್ಲಿಯೇ ನಡೆಸುವಂತಾ ಗಬೇಕೆಂದು ಕೋರಿಕೆಯನ್ನು ಮಂಡಿಸಿದಾಗ, ಸಚಿವರು ಸಹಮತ ಸೂಚಿಸಿದರು. 

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರು, ಎಸ್.ಎಸ್.ವಿ ಸಂಘದ ಅಧ್ಯಕ್ಷ ಎಚ್ .ಆರ್.ಬಸವರಾಜಪ್ಪ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ. ದಿಳ್ಯಪ್ಪ, ಜಿಲ್ಲಾ ಕಸಾಪದ ನಿಕಟ ಪೂರ್ವ ಅಧ್ಯಕ್ಷ ಡಾ. ಎಚ್‌.ಎಸ್. ಮಂಜುನಾಥ್ ಕುರ್ಕಿ, ಸಾಹಿತ್ಯ ಪರಿಷತ್‌ನ ಹಿರಿಯ ಸದಸ್ಯರುಗಳಾದ ವೈ. ವಸಂತಪ್ಪ, ಎಸ್.ಆರ್ ಶಿರಗಂಬಿ, ಜನತಾ ಬಜಾರ್ ಅಧ್ಯಕ್ಷ ಜಿ.ಡಿ.ಗುರುಸ್ವಾಮಿ, ಕೆ.ಸಿ. ಲಿಂಗರಾಜ್ ಆನೆಕೊಂಡ ಉಪಸ್ಥಿತರಿದ್ದರು.

error: Content is protected !!