ಗ್ರಾಮೀಣ ಜನರ ಪ್ರಗತಿಗೆ ಜ್ಞಾನ ವಿಕಾಸ ಸಹಕಾರಿ

ಗ್ರಾಮೀಣ ಜನರ ಪ್ರಗತಿಗೆ ಜ್ಞಾನ ವಿಕಾಸ ಸಹಕಾರಿ

ದೇವರಬೆಳಕೆರೆ ಕಾರ್ಯಕ್ರಮದಲ್ಲಿ ವಸಂತ್ ದೇವಾಡಿಗ

ಮಲೇಬೆನ್ನೂರು, ಜು.11- ದೇವರಬೆಳಕೆರೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ `ಜ್ಞಾನ ದೀಪ’ ಕೇಂದ್ರದ ವಾರ್ಷಿಕೋತ್ಸವವನ್ನು ಮಹಿಳೆಯರು ನಿನ್ನೆ ಸಂಭ್ರಮದಿಂದ ಆಚರಿಸಿದರು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಧರ್ಮಸ್ಥಳ ಯೋಜನೆಯ ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ ಮಾತನಾಡಿ, ಗ್ರಾಮೀಣ ಜನರ ಮತ್ತಷ್ಟು ಪ್ರಗತಿಗೆ ಜ್ಞಾನ ವಿಕಾಸ ಕಾರ್ಯಕ್ರಮದಡಿ ಅನೇಕ ಯೋಜನೆಗಳನ್ನು ಮಾತೃಶ್ರೀ ಹೇಮಾವತಿ ಅಮ್ಮನವರು ರೂಪಿಸಿದ್ದಾರೆ. ಮಹಿಳೆಯರ ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ದೇವಾಡಿಗ ತಿಳಿಸಿದರು.

ತಾಲ್ಲೂಕು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸವಿತಾ, ಕೆ.ಬೇವಿನಹಳ್ಳಿ ವಲಯದ ಮೇಲ್ವಿಚಾರಕ ಮಾರುತಿಗೌಡ, ಜ್ಞಾನ ವಿಕಾಸ ಕಾರ್ಯಕ್ಷೇತ್ರದ ಸಂಯೋಜಕಿ ಉಮಾ, ಒಕ್ಕೂಟದ ಅಧ್ಯಕ್ಷೆ ಕರಿಬಸಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!