ದಾವಣಗೆರೆ, ಜು. 10- ನಗರದ 33ನೇ ವಾರ್ಡ್, ಟಿವಿ ಸ್ಟೇಷನ್ ಕೆರೆ ಹಿಂಭಾಗದಲ್ಲಿನ ಸುಮಾರು 100 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಲಾಯಿತು. ವಾರ್ಡ್ ಸದಸ್ಯ ಕೆ.ಎಂ. ವೀರೇಶ್ ಅವರ ನೇತೃತ್ವದಲ್ಲಿ ಜಿಲ್ಲಾ ಪಂಚಾಯ್ತಿ ಕಚೇರಿ ಬಳಿ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿದ ನಾಗರಿಕರು, ಶೀಘ್ರವೇ ಹಕ್ಕು ಪತ್ರ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮುತ್ತುರಾಜ್, ಸಂತೋಷ್, ಪರುಶಪ್ಪ, ದಾಸಪ್ಪ, ಮುರುಗೇಶ್, ಚಂದ್ರು, ರಾಜಪ್ಪ, ಗೌರಮ್ಮ, ರತ್ನಮ್ಮ, ಮಾಳಮ್ಮ, ಸೀತಮ್ಮ, ರಾಜಮ್ಮ ಇತರರು ಉಪಸ್ಥಿತರಿದ್ದರು.
ಹಕ್ಕು ಪತ್ರ ವಿತರಣೆಗೆ ಸಚಿವರಿಗೆ ಮನವಿ
![14 hakkupatra 11.07.2023 ಹಕ್ಕು ಪತ್ರ ವಿತರಣೆಗೆ ಸಚಿವರಿಗೆ ಮನವಿ](https://janathavani.com/wp-content/uploads/2023/07/14-hakkupatra-11.07.2023-860x537.jpg)