ಓಪನ್ ಟೆನ್ನಿಸ್ ಪಂದ್ಯಾವಳಿ : ಚಿ|| ಶ್ಲೋಕ್ ಆಳಂದ್‌ಗೆ ಟ್ರೋಫಿ

ಓಪನ್ ಟೆನ್ನಿಸ್ ಪಂದ್ಯಾವಳಿ :  ಚಿ|| ಶ್ಲೋಕ್ ಆಳಂದ್‌ಗೆ ಟ್ರೋಫಿ

ಪಾಂಡಿಚೆರಿ,ಜು. 9 – ಇಲ್ಲಿ ಈಚೆಗೆ ಏರ್ಪಡಾಗಿದ್ದ ಓಪನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಸೊ ಲ್ಲಾಪುರದ ಎಂಎಸ್‌ಎಲ್‌ಟಿಎ ಟೆನ್ನಿಸ್ ಸೆಂಟರ್‌ನ ವಿದ್ಯಾರ್ಥಿ ಚಿ|| ಶ್ಲೋಕ್ ಆಳಂದ್‌ ಅವರನ್ನು ಜಂಟಿ ವಿಜೇತ ಎಂದು ಘೋಷಿಸಲಾಯಿತು. 

ಪಾಂಡಿಚೆರಿಯ ಮುಖ್ಯ ಮಂತ್ರಿ ಎನ್. ರಂಗಸ್ವಾಮಿ ಅವರು ಶ್ಲೋಕ್ ಆಳಂದ್‌ಗೆ ಟ್ರೋಫಿಯೊಂದಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪಾಂಡಿಚೆರಿ ಟೆನ್ನಿಸ್ ಅಸೋಸಿಯೇಷನ್ ಅಧ್ಯಕ್ಷ ಪಳನಿ ವೇಲು ಮತ್ತಿತರರು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಚಿ|| ಶ್ಲೋಕ್ ಆಳಂದ್‌, ಸೊಲ್ಲಾಪುರದ ಇಂಜಿನಿಯರ್‌ ಸ್ವಪ್ನಿಲ್‌ ಮತ್ತು ಶ್ರೀಮತಿ ಮೋನಿಕಾ ದಂಪತಿ ಪುತ್ರ ಹಾಗೂ ದಾವಣಗೆರೆಯ ಶ್ರೀ ವೀರಶೈವ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಅಜ್ಜಂಪುರ ಶೆಟ್ರು ಮೃತ್ಯುಂಜಯ ಮತ್ತು ಶ್ರೀಮತಿ ಮೈತ್ರಾ ದಂಪತಿ ಮೊಮ್ಮಗ.

error: Content is protected !!