ಸೇಂಟ್ ಜಾನ್ಸ್ ವಿದ್ಯಾ ಸಂಸ್ಥೆಯಲ್ಲಿ ಮಾತಾಪಿತೃಗಳ ನಮನ ಕಾರ್ಯಕ್ರಮ

ಸೇಂಟ್ ಜಾನ್ಸ್ ವಿದ್ಯಾ ಸಂಸ್ಥೆಯಲ್ಲಿ ಮಾತಾಪಿತೃಗಳ ನಮನ ಕಾರ್ಯಕ್ರಮ

ದಾವಣಗೆರೆ, ಜು. 9- ಗುರುವೆಂದರೆ ಕೇವಲ ವ್ಯಕ್ತಿಯಲ್ಲ. ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ಯುವ ಶಕ್ತಿ ಎಂಬಂತೆ ಗುರುಪೂರ್ಣಿಮೆಯ ಅಂಗವಾಗಿ ಸೇಂಟ್ ಜಾನ್ಸ್ ವಿದ್ಯಾಸಂಸ್ಥೆಯಲ್ಲಿ ಮಾತಾ-ಪಿತೃಗಳ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಂಸ್ಥೆಯ ಕಾರ್ಯದರ್ಶಿ ಟಿ.ಎಂ. ಉಮಾಪತಯ್ಯ  ಮಾತಾ-ಪಿತೃಗಳ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಇಂದಿನ ಮಕ್ಕಳಿಗೆ ಗುರು, ಹಿರಿಯರಲ್ಲಿ ಗೌರವ ಭಾವನೆ ಕಡಿಮೆಯಾಗುತ್ತಿದ್ದು, ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯಗಳ ಕೊರತೆ ಕಾಣುತ್ತಿದ್ದು, ಬಾಲ್ಯದಿಂದಲೇ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಸಚ್ಚಾರಿತ್ರ್ಯವನ್ನು ರೂಢಿಸಿ, ಉತ್ತಮ ಪ್ರಜೆಗಳಾಗುವಂತೆ ಬೆಳೆಸಿ ಎಂದು ಸಲಹೆ ನೀಡಿದರು.

ಗುರುವಿನ ಸಮ್ಮುಖದಲ್ಲಿ ಮುದ್ದು ಮಕ್ಕಳು ಪೂಜಾ ವಿಧಿ, ವಿಧಾನಗಳ ಮೂಲಕ ತಮ್ಮ ತಂದೆ-ತಾಯಿಗಳ ಚರಣಗಳಿಗೆ ಪೂಜೆಯನ್ನು ಸಲ್ಲಿಸಿ, ಪೋಷಕರಿಂದ ಆಶೀರ್ವಾದ ಪಡೆಯುವುದರ ಮೂಲಕ ಸನಾತನ ಸಂಸ್ಕೃತಿಯನ್ನು ಸಾರವನ್ನು ಕಣ್ಮುಂದೆ ತಂದರು.

ಸಂಸ್ಥೆಯ ಪ್ರಾಂಶುಪಾಲ ಆರ್. ಸೈಯ್ಯದ್ ಆರಿಫ್ ಹಾಗೂ ಶ್ರೀಮತಿ ಪ್ರೀತಾ ಟಿ. ರೈ, ಉಪಪ್ರಾಂಶುಪಾಲರಾದ ಶ್ರೀಮತಿ ನೇತ್ರಾವತಿ  ಹಾಗು ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

error: Content is protected !!