ಹರಪನಹಳ್ಳಿ, ಜು.9- ತಾಲ್ಲೂಕಿನ ಎರಡೆತ್ತಿನ ಬಳಿ ಅರಣ್ಯ ಇಲಾಖೆಯಿಂದ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಶಾಸಕರಾದ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಆರ್ಎಫ್ಒ ಕೆ.ಮಲ್ಲಪ್ಪ, ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ತಹಶೀಲ್ದಾರ್ ಶಿವಕುಮಾರ್ ಬಿರಾದಾರ್, ತಾ.ಪಂ ಇಒ ಕೆ.ಆರ್.ಪ್ರಕಾಶ್, ಪುರಸಭೆ ಸದಸ್ಯರಾದ ಎಂ.ವಿ.ಅಂಜಿನಪ್ಪ, ಟಿ. ವೆಂಕಟೇಶ, ಲಾಟಿ ದಾದಾಪೀರ್, ಗೊಂಗಡಿ ನಾಗರಾಜ್, ಮುಖಂಡರಾದ ಎಚ್. ವಸಂತಪ್ಪ, ವೈ.ಕೆ.ಬಿ.ದುರುಗಪ್ಪ, ಎಲ್.ಮಂಜ್ಯಾನಾಯ್ಕ್, ಮತ್ತೂರು ಬಸವರಾಜ್, ಹರಿಯಮ್ಮನಹಳ್ಳಿ ಶಿವರಾಜ್ ಪ್ರಸಾದ್ ಸೇರಿದಂತೆ ಇತರರು ಇದ್ದರು.