ಮಲೇಬೆನ್ನೂರು : ಲಯನ್ಸ್‌ ಕ್ಲಬ್‌ನಿಂದ ವನಮಹೋತ್ಸವ

ಮಲೇಬೆನ್ನೂರು : ಲಯನ್ಸ್‌ ಕ್ಲಬ್‌ನಿಂದ ವನಮಹೋತ್ಸವ

ಮಲೇಬೆನ್ನೂರು, ಜು.9- ಇಲ್ಲಿನ ಲಯನ್ಸ್ ಕ್ಲಬ್ ವತಿಯಿಂದ ಪಟ್ಟಣದ ಡಾ. ರಾಜ್‌ಕುಮಾರ್ ಬಡಾವಣೆಯಲ್ಲಿ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು. 

ಲಯನ್ಸ್ ಕ್ಲಬ್ ಅಧ್ಯಕ್ಷ ಚಿಟ್ಟಕ್ಕಿ ನಾಗರಾಜ್, ಕಾರ್ಯದರ್ಶಿ ಸಿರಿಗೆರೆ ಸಿದ್ದಪ್ಪ, ಖಜಾಂಚಿ ಭರಮಳ್ಳಿ ಮಂಜುನಾಥ್, ಲಯನ್ಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಚಿದಾನಂದಪ್ಪ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಎನ್.ಜಿ.ಶಿವಾಜಿ ಪಾಟೀಲ್, ಓ.ಜಿ.ರುದ್ರಗೌಡ್ರು, ಪುರಸಭೆ ಸದಸ್ಯ ಬೆಣ್ಣೆಹಳ್ಳಿ ಸಿದ್ದೇಶ್, ಬಸವ ಬಳಗದ ಅಧ್ಯಕ್ಷ ವೈ.ನಾರೇಶಪ್ಪ, ಓ.ಜಿ.ಕುಮಾರ್, ಉಡೇದರ ಸಿದ್ದೇಶ್, ಬೆಣ್ಣೆಹಳ್ಳಿ ಹನುಮೇಶ್ (ಬಾಬು), ಬಟ್ಟೆ ಅಂಗಡಿ ವಿಶ್ವ, ಅಂಗನವಾಡಿ ಕಾರ್ಯಕರ್ತೆ ಮಂಜುಳಾ ಸೇರಿದಂತೆ ಬಸವ ಬಳಗ, ಅಕ್ಕನ ಬಳಗ ಮತ್ತು ಕದಳಿ ಮಹಿಳಾ ವೇದಿಕೆಯ ಸದಸ್ಯರು ವನಮಹೋತ್ಸವದಲ್ಲಿ ಭಾಗವಹಿಸಿದ್ದರು.

error: Content is protected !!