ವನ ಮಹೋತ್ಸವಕ್ಕೆ ಶಾಸಕ ಎಸ್ಸೆಸ್ ಚಾಲನೆ

ವನ ಮಹೋತ್ಸವಕ್ಕೆ ಶಾಸಕ ಎಸ್ಸೆಸ್ ಚಾಲನೆ

ದಾವಣಗೆರೆ, ಜು.6- ಅರಣ್ಯ ಇಲಾಖೆ ವತಿ ಯಿಂದ ಜುಲೈ ತಿಂಗಳಲ್ಲಿ ಹಮ್ಮಿಕೊಂಡಿ ರುವ ಬೃಹ ತ್ ಸಸಿ ನೆಡುವ ಕಾರ್ಯಕ್ರಮಕ್ಕೆ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಚಾಲನೆ ನೀಡಿದರು.

ಶಾಮನೂರು ರಸ್ತೆಯ ಉದ್ಯಾನವನದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿದ ಶಾಸಕರು, ವಿಶ್ವದಲ್ಲಿ ಆಮ್ಲಜನಕದ ಕೊರತೆ ಕಾಣುತ್ತಿದ್ದು, ಇದಕ್ಕೆ ಪರಿಹಾರವಾಗಿ ಹಸಿರೀಕರಣ ಆಗಬೇಕೆಂದು ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿವೆ ಎಂದು ತಿಳಿಸಿದರು.

ಸರ್ಕಾರ ರೂಪಿಸುವ ಯೋಜನೆಗಳ ಜೊತೆಗೆ ಸಾರ್ವಜನಿಕರು ಸಹ ಸಸಿಗಳನ್ನು ನೆಡಬೇಕೆಂದು ಕರೆ ನೀಡಿದರು. ಈ ಹಿಂದೆ ಸಾಲು ಮರದ ತಿಮ್ಮಕ್ಕನವರ ಪರಿಸರ ಪ್ರೇಮದ ಕಡೆ ಸರ್ಕಾರದ ಗಮನ ಸೆಳೆದಿದ್ದು ತಾವೇ ಎಂಬುದನ್ನು ಇತ್ತೀಚೆಗೆ ನಮ್ಮ ಮನೆಗೆ ಬಂದಿದ್ದ ತಿಮ್ಮಕ್ಕನವರೇ ನೆನಪಿಸಿಕೊಂಡರು ಎಂದರು. 

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯ ದರ್ಶಿ ದಿನೇಶ್ ಕೆ.ಶೆಟ್ಟಿ, ಮಹಾಪೌರ ವಿನಾಯಕ ಪೈಲ್ವಾನ್, ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ, ಪಾಲಿಕೆ ಸದಸ್ಯರಾದ ಸಯೀದ್ ಚಾರ್ಲಿ ಪೈಲ್ವಾನ್, ಜಾಕೀರ್ ಅಲಿ, ಉದಯಕುಮಾರ್, ಮುಖಂಡ ರುಗಳಾದ ಎಸ್.ಮಲ್ಲಿಕಾರ್ಜುನ್, ತಿಪ್ಪೇಸ್ವಾಮಿ, ಇಮ್ತಿಯಾಜ್ ಬೇಗ್ ಮತ್ತಿತರರಿದ್ದರು.

error: Content is protected !!