ಮರಿಯಾ ನಿವಾಸ್ ಶಾಲೆಯಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ

ಮರಿಯಾ ನಿವಾಸ್ ಶಾಲೆಯಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ

ಹರಿಹರ, ಜು. 6- ನಗರದ ಮರಿಯಾ ನಿವಾಸ್ ಶಾಲೆಯಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.    ದಾವಣಗೆರೆ ಆರೋಗ್ಯ ಇಲಾಖೆ  ಅಧಿಕಾರಿ ಡಾ. ನಟರಾಜ್   ಉದ್ಘಾಟನೆ  ಮಾಡಿದರು.

ಡಾ. ಸತೀಶ್  ಮಾತನಾಡಿ, ಶಾಲಾ ಶಿಕ್ಷಕರಿಗೆ ಮಲೇರಿಯಾ ಮತ್ತು ಡೆಂಗ್ಯೂ, ಚಿಕನ್ ಗುನ್ಯಾ ರೋಗವನ್ನು ತಡೆಗಟ್ಟುವ ಮುಂಜಾಗ್ರತಾ ಕ್ರಮಗಳ ಬಗ್ಗೆ  ಸಂಪೂರ್ಣ  ಮಾಹಿತಿ  ನೀಡಿದರು. ಮಲೇರಿಯಾ ಮುಕ್ತ  ಮಾಡಲು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸುವಂತೆ ಅವರು ಮನವಿ ಮಾಡಿದರು.

 ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ ಚಂದ್ರಮೋಹನ್, ಬಿಇಓ ಹನುಮಂತಪ್ಪ, ಹೊರಕೇರಿ, ಉಮ್ಮಣ್ಣ, ರಾಜಪ್ಪ, ನಾಗರಾಜ್, ಮಹೇಶ್ ಜಿ. ಆರ್.,  ದಾದಾಪೀರ್ ಇತರರು ಹಾಜರಿದ್ದರು

error: Content is protected !!