ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು: ಎ.ಬಿ. ಚಂದ್ರಶೇಖರ್

ಮುಂದೆ ಗುರಿ ಇರಬೇಕು, ಹಿಂದೆ  ಗುರು ಇರಬೇಕು: ಎ.ಬಿ. ಚಂದ್ರಶೇಖರ್

ದಾವಣಗೆರೆ, ಜು.5- ಏಳಿ ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ ಎಂಬ ಸ್ವಾಮಿ ವಿವೇಕಾ ನಂದರ ವಾಣಿಯು ನಮ್ಮನ್ನು ಗುರಿ ತಲುಪಿಸುವಂತೆ ಪ್ರೇರೇಪಿಸುತ್ತದೆ. ನಾವು ಗುರಿ ಸಾಧಿಸುವಲ್ಲಿ ನಮಗೆ ಮುಂದೆ ಗುರಿ ಇರಬೇಕು. ಹಿಂದೆ ಗುರು ಇರಬೇಕು ಎಂದು ದಾವಣಗೆರೆಯ ನಿವೃತ್ತ ಅಧ್ಯಾಪಕ ಎ.ಬಿ. ಚಂದ್ರಶೇಖರ್ ತಿಳಿಸಿದರು.

ತಾಲ್ಲೂಕಿನ ಕುರ್ಕಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿ ಕೊಂಡಿದ್ದ ಪ್ರೇರಣಾ ತರಬೇತಿ ತರಗತಿಯಲ್ಲಿ ಮಕ್ಕಳನ್ನು ಉದ್ದೇ ಶಿಸಿ ಅವರು ಮಾತನಾಡಿದರು.

ಶ್ರದ್ಧತೆ, ಏಕಾಗ್ರತೆ, ಶ್ರಮ, ನಿಸ್ವಾರ್ಥತೆ, ಸಹನೆ, ಜ್ಞಾನ, ವಿದ್ಯೆ, ಮನಸ್ಸು, ನಿಷ್ಠೆ ಈ ಎಲ್ಲಾ ಗುಣ ಗಳು ವಿದ್ಯಾರ್ಥಿಗಳಲ್ಲಿರಬೇಕು. ಜ್ಞಾನವೆಂದರೆ ನಮ್ಮಲ್ಲಿರುವ ಸಾಮಾನ್ಯ ತಿಳಿವಳಿಕೆ, ವಿದ್ಯೆ ಎಂದರೆ ಪುಸ್ತಕದಲ್ಲಿರುವ ಮತ್ತು ಸಮೂಹದೊಂದಿಗೆ ವಿಷಯ ಗಳನ್ನು ಅರಿಯುವುದು. ಹಾಗಾಗಿ ಜ್ಞಾನಕ್ಕೂ ವಿದ್ಯೆಗೂ ವ್ಯತ್ಯಾಸವಿದೆ ಎಂದು ತಿಳಿಸಿದರು.

ಸಾಧನೆ ಮಾಡಲು ಮೊದಲು ನಮ್ಮ ಮೇಲೆ ನಮಗೆ ನಂಬಿಕೆ, ವಿಶ್ವಾಸ ಇರಬೇಕು. ಇದರೊಂದಿಗೆ ಸಾಧನೆ ಮಾಡಬೇಕೆಂಬ ಹಠ, ಛಲ ಇರಬೇಕು. ಇವು ಇದ್ದರೆ ಯಾವುದೂ ಕಷ್ಟವಲ್ಲ. ಕಾಲಿಲ್ಲದ ಬಚೇಂದ್ರಪಾಲ್ ಎಂಬ ಯುವತಿ ಹಿಮಾಲಯ ಪರ್ವತವನ್ನು ಏರಿದ್ದನ್ನು ಉದಾಹರಿಸಿದರು.

ಹಾಗೆಯೇ ಬಹಳ ಕೆಳಹಂತ ದಿಂದ ಹಠ, ಛಲದಿಂದ ಅತ್ಯುನ್ನತ ಹುದ್ದೆಗೇರಿರುವುದನ್ನು ಪರಿಚಯಿ ಸುತ್ತಾ ಸಾಧನೆ ಮಾಡಬೇಕೆಂಬ ಹಠ, ಛಲವೊಂದಿದ್ದರೆ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಹೇಳುವ ಮೂಲಕ ಮಕ್ಕಳನ್ನು ಪ್ರೇರೇಪಿಸಿದರು.

ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸಿ.ಜಿ. ಜಗದೀಶ್ ಕೂಲಂಬಿ ಸ್ವಾಗತಿಸಿದರು. ಶಿಕ್ಷಕರಾದ ಹೆಚ್. ವಿರೂಪಾಕ್ಷಿ, ಎಸ್. ಶಾಂತ ಕುಮಾರಿ, ಎಸ್.ಎಂ. ಶಕುಂತಲಾ, ಹೆಚ್.ಆರ್. ಪ್ರಕಾಶ್, ಎ.ಆರ್. ರಾಘವೇಂದ್ರ, ಎಂ.ಎನ್. ನಾಗರಾಜ್ ಭಾಗವಹಿಸಿದ್ದರು. 

error: Content is protected !!