ದಾವಣಗೆರೆ,ಜು.5- ಇಲ್ಲಿಗೆ ಸಮೀಪದ ತರಳಬಾಳು ನಗರದಲ್ಲಿರುವ ಶಿವ ವಿದ್ಯಾಸಂಸ್ಥೆಯ ಸೊಪ್ರೊಸೈನ್ ಕಾನ್ಸೆಪ್ಟ್ ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಹದಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಮೀರುದ್ಧೀನ್ ಖಾಜಿ ನೇತೃತ್ವದಲ್ಲಿ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಕಾರ್ಯದರ್ಶಿ ಡಾ.ಎಲ್.ಜಗದೀಶ್ ಮತ್ತು ಪ್ರಾಂಶುಪಾಲ ಟಿ.ಎನ್.ಶಿವಯೋಗಿ ಮತ್ತು ಶಿಕ್ಷಕ ವೃಂದದವರು ಹಾಜರಿದ್ದರು.
ಸೊಪ್ರೊಸೈನ್ ಕಾನ್ಸೆಪ್ಟ್ ಶಾಲೆಯಲ್ಲಿ ವೈದ್ಯರ ದಿನ- ಆರೋಗ್ಯ ಶಿಬಿರ
![22 sophoresine news 06.07.2023 ಸೊಪ್ರೊಸೈನ್ ಕಾನ್ಸೆಪ್ಟ್ ಶಾಲೆಯಲ್ಲಿ ವೈದ್ಯರ ದಿನ- ಆರೋಗ್ಯ ಶಿಬಿರ](https://janathavani.com/wp-content/uploads/2023/07/22-sophoresine-news-06.07.2023-860x573.jpg)