ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ಮೊಬೈಲ್ ಕಳ್ಳನ ಬಂಧನ

ಪೊಲೀಸರ ಕ್ಷಿಪ್ರ ಕಾರ್ಯಾಚರಣೆ  ಮೊಬೈಲ್ ಕಳ್ಳನ ಬಂಧನ

ದಾವಣಗೆರೆ, ಜು.3- ನಗರದ ಎಂಸಿಸಿ `ಬಿ’ಬ್ಲಾಕ್‌ನಲ್ಲಿ ನಿನ್ನೆ ಸ್ಕೂಟರ್‌ನಲ್ಲಿ ಬಂದು, ಪಾದಚಾರಿಯೊಬ್ಬರ ಮೊಬೈಲನ್ನು     ಕಿತ್ತುಕೊಂಡು   ಹೋದ ವ್ಯಕ್ತಿಯನ್ನು ಬಡಾವಣೆ ಪೋಲಿಸರು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. 

ಘಟನಾ ಸ್ಥಳಕ್ಕೆ ಭೇಟಿ ಮಾಡಿ ಸ್ಥಳದಲ್ಲಿ ಸಿಕ್ಕ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ  ಆವರಗೆರೆ ವಾಸಿ ಎನ್ನಲಾದ ಎ. ನಿಂಗರಾಜ್ ಎಂಬಾತನ್ನು ದಸ್ತಗಿರಿ ಮಾಡಿ, ಕಿತ್ತುಕೊಂಡು ಹೋಗಿದ್ದ 10 ಸಾವಿರ ರೂ. ಮೌಲ್ಯದ ಮೊಬೈಲ್,  ಕೃತ್ಯಕ್ಕೆ ಬಳಸಿದ ಸ್ಕೂಟರ್ ಅಂದಾಜು ಮೌಲ್ಯ 50,000/- ರೂ ಹಾಗೂ ಕೆಟೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ 20,000/- ರೂ.  ಮೌಲ್ಯದ ಮೊಬೈಲ್ ಅಮಾನತ್ತು ಪಡಿಸಿಕೊಂಡು ಆರೋಪಿಯನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಬಡಾವಣೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಧನಂಜಯ,  ಸಿಬ್ಬಂದಿಗಳಾದ, ಸಿದ್ದೇಶ್, ಸೈಯದ್ ಅಲಿ, ಅರುಣ ಕುಮಾರ, ಹನುಮಂತಪ್ಪ ಸಿ, ಸೋಮಪ್ಪ, ಗೀತಾ ಹೆಚ್. ಇವರುಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ.   

error: Content is protected !!