ದಾವಣಗೆರೆ, ಜು. 3 – ದಾವಣಗೆರೆ ವಿದ್ಯಾನಗರ ರೋಟರಿ ಮತ್ತು ಇನ್ನರ್ವ್ಹೀಲ್ ಸಂಸ್ಥೆಯ ಪದಗ್ರಹಣ ಕಾರ್ಯಕ್ರಮವು ಮಾಗನೂರು ಬಸಪ್ಪ ರೋಟರಿ ಭವನದಲ್ಲಿ ಇಂದು ನಡೆಯಿತು. 2023-24ನೇ ಸಾಲಿನ ರೋಟರಿಯ ಅಧ್ಯಕ್ಷರಾಗಿ ಹೆಚ್.ಕೆ. ಕಲ್ಲಪ್ಪ ಮತ್ತು ಕಾರ್ಯದರ್ಶಿಯಾಗಿ ಹೆಚ್.ಎಂ. ಜಯಣ್ಣ, ಇನ್ನರ್ವ್ಹೀಲ್ ಅಧ್ಯಕ್ಷೆಯಾಗಿ ಮಂಜುಳಾ ಕರ್ಜಿಗಿ ಮತ್ತು ಕಾರ್ಯದರ್ಶಿಯಾಗಿ ಪ್ರೇಮ ಮಹೇಶ್ವರಪ್ಪ ಪದಗ್ರಹಣ ಮಾಡಿದರು. ಮಾಗನೂರು ಸಂಗಮೇಶಗೌಡ್ರು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ರೋಟರಿ ಕೆ.ಎಸ್. ನಾಗೇಂದ್ರ ಮತ್ತು ಇನ್ನರ್ವ್ಹೀಲ್ ಡಿಸ್ಟಿಕ್ಟ್ ಟ್ರೇಜರರ ಶೋಭಾ ಶಿವರಾಜ ಭಾಗವಹಿಸಿದ್ದರು. ರೋಟರಿ ಮಾಜಿ ರಾಜ್ಯಪಾಲರಾದ ಆರ್.ಎಸ್. ನಾರಾಯಾಣಸ್ವಾಮಿ, ಪಿಹೆಚ್ಎಫ್ ವಿಶ್ವಜಿತ್ ಜಾಧವ್, ಎನ್.ಬಿ. ಮೃತ್ಯಂ ಜಯಪ್ಪ. 2023-24 ಸಾಲಿನ ಹೊಸ ಎ.ಜಿ. ಆನಂದ ಕುಮಾರ, ಚಾರ್ಟರ್ ಸುಲೋಚನಾ ರಾಜಶೇಖರ್ ಮತ್ತು ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.