ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಯಜ್ಞಮಾತೆ ಆದಿದೇವಿ ಜಗದಂಬಾ ಸ್ಮೃತಿ ದಿನ

ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಯಜ್ಞಮಾತೆ ಆದಿದೇವಿ ಜಗದಂಬಾ ಸ್ಮೃತಿ ದಿನ

ದಾವಣಗೆರೆ, ಜು. 3- ದೊಡ್ಡಬಾತಿಯ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಸಂಸ್ಥೆಯ ಯಜ್ಞಮಾತೆ ಆದಿದೇವಿ ಜಗದಂಬಾರವರ ಸ್ಮೃತಿ ದಿನ ಕಾರ್ಯಕ್ರಮವನ್ನು ಆಚರಿಸಲಾಯಿತು.

ಈಶ್ವರೀಯ ವಿಶ್ವವಿದ್ಯಾಲಯದ ದಾವಣಗೆರೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ದೊಡ್ಡಬಾತಿ ತಪೋವನದ ಅಧ್ಯಕ್ಷ ಡಾ. ಶಶಿಕುಮಾರ್ ಮೆಹರ್ವಾಡೆ, ಗ್ರಾ.ಪಂ. ಅಧ್ಯಕ್ಷ  ಕೆ.ಜಿ. ಉಮೇಶ್, ಮಾಜಿ ಅಧ್ಯಕ್ಷ ಶಿವಕುಮಾರ್, ಸದಸ್ಯರಾದ ಡಿ.ಆರ್. ವೀರೇಶ್, ಭಾನುವಳ್ಳಿ ಸಿದ್ದಣ್ಣ, ವಿಎಸ್ಎಸ್ಎನ್ ಸರಸ್ವತಿ ಶಾಲೆಯ ಅಧ್ಯಕ್ಷ ನಾಗರಾಜ್, ರೇವಣ್ಣ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬ್ರಹ್ಮಾಕುಮಾರಿ ಸಂಭ್ರಮ ಕಾರ್ಯಕ್ರಮ ನಿರೂಪಿಸಿದರು. ಈಶ್ವರೀಯ ವಿಶ್ವವಿದ್ಯಾಲಯದ ದೊಡ್ಡಬಾತಿ ಶಾಖೆ ಸಂಚಾಲಕರಾದ ಬ್ರಹ್ಮಾಕುಮಾರಿ ಗೌರಕ್ಕ ಸ್ವಾಗತಸಿದರು. ಬ್ರಹ್ಮಾಕುಮಾರಿ ದೇವಿಕಾ ವಂದಿಸಿದರು.

error: Content is protected !!