ದಾವಣಗೆರೆ, ಜೂ. 25- ತಾಲ್ಲೂಕಿನ ಕುರ್ಕಿ ಸರ್ಕಾರಿ ಪ್ರೌಢಶಾಲೆಗೆ ನಗರದ ಎಪಿಐ ಮತ್ತು ಸಿಸಿಎಸ್ ನ ಮಾಜಿ ನಿರ್ದೇಶಕ ಕುರ್ಕಿ ಕೆ.ಜಿ. ವೇದಮೂರ್ತಿ ಗೌಡ್ರು 25 ಸಾವಿರ ರೂ. ಮೌಲ್ಯದ ಕುಡಿಯುವ ನೀರಿನ ಫಿಲ್ಟರ್ ಕೊಡುಗೆಯಾಗಿ ನೀಡಿದರು.
ಈ ಶಾಲೆಯಲ್ಲಿ ಓದುತ್ತಿರುವ 160 ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ. ಅವರಿಗೆ ಶಾಲಾ ಶಿಕ್ಷಕ ವೃಂದದವರು, ಶಾಲಾಭಿವೃದ್ಧಿ ಸಮಿತಿ ಹಾಗೂ ಮಕ್ಕಳು, ಪೋಷಕರು ಅಭಿನಂದಿಸಿದ್ದಾರೆ.