ಕಾಂಗ್ರೆಸ್ ವಿವಿಧ ಘಟಕಗಳಿಂದ ಸನ್ಮಾನ

ಕಾಂಗ್ರೆಸ್ ವಿವಿಧ ಘಟಕಗಳಿಂದ ಸನ್ಮಾನ

ದಾವಣಗೆರೆ, ಜೂ. 25- ಜಿಲ್ಲಾ ಕಾಂಗ್ರೆಸ್ ಸಮಿತಿಯ ವಿವಿಧ ಘಟಕಗಳ ಜಿಲ್ಲಾಧ್ಯಕ್ಷರ ವತಿಯಿಂದ ಜುಲೈ ತಿಂಗಳಲ್ಲಿ ನಗರದ ಅಭಿನವ ರೇಣುಕಾ ಮಂದಿರದಲ್ಲಿ ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಬಿ.ಹೆಚ್. ವೀರಭದ್ರಪ್ಪ ತಿಳಿಸಿದರು.

ನಗರದಲ್ಲಿ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ವತಿಯಿಂದ ನಿನ್ನೆ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಚಿವ ಹೆಚ್.ಸಿ. ಮಹದೇವಪ್ಪ ಹಾಗೂ ದಾವಣಗೆರೆಯ ಜಿಲ್ಲೆಯ ವಿಜಯಶಾಲಿ ಗಳಾದ ಶಾಸಕರುಗಳನ್ನು ಸನ್ಮಾನಿಸಲಾಗುವುದು ಎಂದರು ಪೂರ್ವಭಾವಿ ಸಭೆಯಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಅನಿತಾ ಬಾಯಿ, ಸೇವಾದಳದ ಡೋಲಿ  ಚಂದ್ರು, ಎಸ್ಟಿ ಘಟಕದ ನಾಗರಾಜ್ ನಾಯಕ, ಎಸ್ ರಾಮಯ್ಯ, ಹೆಚ್ ಜಯಣ್ಣ, ಬಿ.ಎಂ. ರಾಮಸ್ವಾಮಿ,  ಕಾಶಿನಾಥ್, ಬಾತಿ ಶಿವಕುಮಾರ್, ಆದಾಪುರ ನಾಗರಾಜಪ್ಪ, ಕೊಡಪಾನ ದಾದಾಪೀರ್, ರಾಕೇಶ್ ಜಿ. ಮಂಜಮ್ಮ, ಶುಭ ಮಂಗಳ, ಹರೀಶ್ ಎಸ್‌.ಎಂ. ಗೌಡ್ರ್ ಬೀರೇಶ್, ಪದಾಧಿಕಾರಿಗಳು ಪಾಲ್ಗೊಂಡಿದ್ದರು.

error: Content is protected !!