ಸೇಂಟ್ ಜಾನ್ಸ್ ಶಾಲೆಗೆ ಸಾಲು ಮರದ ತಿಮ್ಮಕ್ಕ ಭೇಟಿ : ವನಮಹೋತ್ಸವ

ಸೇಂಟ್ ಜಾನ್ಸ್ ಶಾಲೆಗೆ ಸಾಲು ಮರದ ತಿಮ್ಮಕ್ಕ ಭೇಟಿ : ವನಮಹೋತ್ಸವ

ದಾವಣಗೆರೆ, ಜೂ. 25- ನಗರದ ಹೆಚ್‌ಆರ್‌ಬಿ ಬಡಾವಣೆಯಲ್ಲಿರುವ ಸೇಂಟ್ ಜಾನ್ಸ್ ಶಾಲೆಗೆ ಪದ್ಮಶ್ರೀ ಪುರಸ್ಕೃತೆ, ಶತಾಯುಷಿ ಡಾ. ಸಾಲುಮರದ ತಿಮ್ಮಕ್ಕ ಆಗಮಿಸಿ, ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ ಮಕ್ಕಳಿಗೆ ಗಿಡಮರಗಳ ಪಾಲನೆ-ಪೋಷಣೆ ಮಾಡಿ ಪರಿಸರವನ್ನು ಉಳಿಸಿ-ಬೆಳೆಸುವ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷ ಅನಿಲ್‌ಕುಮಾರ್ ಹುಲ್ಲುಮನೆ, ಕಾರ್ಯದರ್ಶಿ ಉಮಾಪತಯ್ಯ, ಖಜಾಂಚಿ ಪ್ರವೀಣ್ ಹುಲ್ಲುಮನೆ, ಪ್ರಾಂಶುಪಾಲರಾದ ಆರ್. ಸೈಯದ್ ಆರೀಫ್, ಶ್ರೀಮತಿ ಪ್ರೀತಾ ಟಿ. ರೈ, ಉಪ ಪ್ರಾಂಶುಪಾಲರಾದ ಶ್ರೀಮತಿ ನೇತ್ರಾವತಿ, ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ರಾಮಚಂದ್ರ ಅಣ್ಣಾಜಿ, ಶ್ರೀಮತಿ ರೇಣುಕಾ ಆನಂದ, ಸಿಪಿಐ ಸುನೀಲ್‌ಕುಮಾರ್ ಹುಲ್ಲುಮನೆ ಹಾಗೂ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು  ಉಪಸ್ಥಿತರಿದ್ದರು.

error: Content is protected !!