ಕ್ಷೇತ್ರವಾರು ಬಿತ್ತನೆ ಬೀಜ ಪೂರೈಸಲು ಕ್ರಮ

ಕ್ಷೇತ್ರವಾರು ಬಿತ್ತನೆ ಬೀಜ ಪೂರೈಸಲು ಕ್ರಮ

ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ

ಹೊನ್ನಾಳಿ,ಜೂ.18- ಪ್ರಸಕ್ತ ವರ್ಷದಲ್ಲಿ ಬಿತ್ತನೆ ಬೀಜದ ಕೊರತೆಯಾ ಗದಂತೆ ಮುಖ್ಯಮಂತ್ರಿಗಳು ಹಾಗು ಕೃಷಿ ಸಚಿವರು ಸಭೆ ನಡೆಸಿ ಆಯಾ ಕ್ಷೇತ್ರವಾರು ರೈತರ ಬೇಡಿಕೆಗನುಗುಣವಾಗಿ ಬಿತ್ತನೆ ಬೀಜ ವಿತರಣೆಗೆ ಮುಂದಾಗಿದ್ದಾರೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಟಿ.ಎ.ಪಿ.ಸಿ.ಎಂ.ಎಸ್ ಆವರಣದಲ್ಲಿ ಕೃಷಿ ಇಲಾಖೆ  ಸಹಾಯಧನದಡಿಯಲ್ಲಿ  ರೈತರಿಗೆ ಬಿತ್ತನೆ  ಬೀಜಗಳನ್ನು ವಿತರಿಸಿ ಈ ವಿಷಯ ತಿಳಿಸಿದರು.  

ಸರ್ಕಾರವು ಕೃಷಿ ಇಲಾಖೆ ಮೂಲಕ ಮುಂಗಾರು  ಹಂಗಾಮಿನಲ್ಲಿ ಮೆಕ್ಕೆಜೋಳ, ತೊಗರಿ ಅಲಸಂಧಿ, ಹೆಸರು, ಸೋಯಾಬೀನ್  ಹಾಗೂ ಶೇಂಗಾ ಬೆಳಗಳ ಬಿತ್ತನೆ ಬೀಜಗಳನ್ನು  ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ.

ಪ್ರಸ್ತುತ ಮುಂಗಾರು ಹಂಗಾಮಿನಿಂದ ರಾಜ್ಯದ ರೈತ ಸಂಪರ್ಕ ಕೇಂದ್ರಗಳಲ್ಲಿ ಬಾರ್ ಕೋಡ್ ಮೂಲಕ ಬಿತ್ತನೆ ಬೀಜ ಹಾಗೂ ಕೃಷಿ ಪರಿಕರಗಳನ್ನು ವಿತರಣೆ ಮಾಡಲಾಗುವುದು ವಿಳಂಬವಾದರೆ ರೈತರು ಸಹಕರಿಸಬೇಕಾಗಿದೆ. ತಾಲ್ಲೂಕಿನ ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜಗಳ ಹಾಗೂ ರಸಗೊಬ್ಬರದ ದಾಸ್ತಾ ನಿದ್ದು, ಯಾವುದೇ ಕೊರತೆ ಇಲ್ಲವೆಂದರು.

ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವುದನ್ನು ರೈತರು ಕೃಷಿ ಇಲಾಖೆ ಅಥವಾ ತಮ್ಮ  ಗಮನಕ್ಕೆ ತಂದರೆ ಕ್ರಮ ಕೈಗೊಳ್ಳಲು ಮುಂದಾಗುವುದಾಗಿ ತಿಳಿಸಿದ ಅವರು, ಕೃಷಿ ಇಲಾಖೆಯ ಸಲಹೆಯಂತೆ ಮಳೆ ವಿಳಂಬವಾದರೂ ಜುಲೈ ಕೊನೆಯ ವಾರದವರೆಗೂ ತಾಲ್ಲೂಕಿನ ರೈತರು ಬಿತ್ತನೆ ಮಾಡಲಿದ್ದು ರಾಗಿಯ ಬೆಳೆಗೆ ಮುಂದಾಗುವಂತೆಯೂ ಕರೆ ನೀಡಿದರು.

ಈ ಸಂದರ್ಭದಲ್ಲಿ  ಸಹಾಯಕ ಕೃಷಿ ನಿರ್ದೇಶಕಿ ಪ್ರತಿಮಾ, ಕೃಷಿ ಅಧಿಕಾರಿ ಅತಿಕ್, ಟಿಎಪಿಸಿಎಂಎಸ್ ಅಧ್ಯಕ್ಷ ಗಜೇಂದ್ರಪ್ಪ, ನಿದೇರ್ಶಕರಾದ ಸೋಗಿಲು ಮಲ್ಲೇಶಪ್ಪ, ಹೆಚ್.ಎಂ.ಬಸವರಾಜ್, ಈಶ್ವರಪ್ಪ, ಶೇಖರಪ್ಪ, ಕಾರ್ಯದರ್ಶಿ ಮುರುಗೇಶ, ಪಿಎಲ್‍ಡಿ ಬ್ಯಾಂಕ್ ಉಪಾ ಧ್ಯಕ್ಷ ಹನುಮಂತಪ್ಪ, ರೈತ ಮುಖಂಡರಾದ ಕೆಂಗನಹಳ್ಳಿ ಷಣ್ಮುಖಪ್ಪ, ಕ್ಯಾಸಿನಕೇರಿ ಶೇಖರಪ್ಪ, ಶಿವರಾಮ ನಾಯ್ಕ, ತರಗನಹಳ್ಳಿ ಅಶೋಕ ಇನ್ನಿತರರಿದ್ದರು.

error: Content is protected !!