ಪ್ರೀತಿ ಆರೈಕೆ – ಆರೋಗ್ಯ ಕಲರವ

ಪ್ರೀತಿ ಆರೈಕೆ – ಆರೋಗ್ಯ ಕಲರವ

ದಾವಣಗೆರೆ, ಜೂ. 18 – ನಗರದ ವಿವೇಕಾ ನಂದ ಬಡಾವ ಣೆಯ ಶ್ರೀ ಚಿಕ್ಕನಹಳ್ಳಿ ದೊಡ್ಡಪ್ಪ ಪ್ರೌಢ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವು ಅಪ್ಪಂದಿರ ದಿನ (ಜೂನ್ 18)ದಂದು ಅರ್ಥಪೂರ್ಣವಾಗಿ ನೆರವೇರಿತು.

ಶಿಬಿರದಲ್ಲಿ ಇತ್ತೀಚಿನ ದಿನಗಳಲ್ಲಿ ಪಿಡುಗಾಗಿ ಪರಿಣಮಿಸಿರುವ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ತೊಂದರೆಗಳ ಬಗ್ಗೆ ಶಿಬಿರದಲ್ಲಿ ತಪಾಸಣೆ ನಡೆಸಿ, ಸೂಕ್ತ ಚಿಕಿತ್ಸೆಯ ಬಗ್ಗೆ ತಿಳುವಳಿಕೆ ನೀಡಲಾಯಿತು.   ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ. ಟಿ.ಜಿ. ರವಿಕುಮಾರ್ ಅವರು ತಪಾಸಣೆಯ ನೇತೃತ್ವ ವಹಿಸಿದ್ದರು.  ಮಾಜಿ ಶಾಸಕರೂ ಆದ ಪ್ರೀತಿ ಆರೈಕೆ ಟ್ರಸ್ಟ್ ಮತ್ತು ಆರೈಕೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಟಿ. ಗುರುಸಿದ್ಧನಗೌಡ, ಡಾ. ಸುದರ್ಶನ್, ಸಂಜಯ್, ಸಂತೋಷ್ ಅರುಣ್, ವಿಶ್ವನಾಥ್, ಶಿವ ಶಂಕರ್, ವೀರಭದ್ರಪ್ಪ, ಶ್ರೀಮತಿ ವೀಣಾ ನಂಜಪ್ಪ ಸೇರಿದಂತೆ ಇತರರು ತಪಾಸಣೆ ಶಿಬಿರದಲ್ಲಿ ಭಾಗವಹಿಸಿದ್ದರು.

error: Content is protected !!