ದಾವಣಗೆರೆ, ಜೂ. 16 – ಎಲೆಬೇತೂರು ಗ್ರಾಮದಲ್ಲಿ ‘ಗಂಗಾ ಮಹೋತ್ಸವ’ದ ಅಂಗವಾಗಿ ಗಂಗಾಮತಸ್ಥರು ಭಾಜಾ-ಭಜಂತ್ರಿಯೊಂದಿಗೆ ಮೆರವಣಿಗೆ ಮೂಲಕ ಕೆರೆಗೆ ತೆರಳಿ ಗಂಗಾಮಾತೆಗೆ ಹಾಗೂ ನಾಗದೇವತೆಗೆ ವಿಶೇಷವಾಗಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗಂಗಾಮತಸ್ಥರೊಂದಿಗೆ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಪಾಲ್ಗೊಂಡು ನಾಡಿನಲ್ಲಿ ಕಾಲಕಾಲಕ್ಕೆ ಮಳೆಯಾಗಿ ರೈತರ, ಜನ-ಜಾನುವಾರುಗಳ ಬಾಳು ಹಸನಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಎಲೆಬೇತೂರಿನಲ್ಲಿ ಕೆರೆ ಗಂಗಾಮಾತೆಗೆ ಪೂಜೆ
![19 yelebethur ganga poojenews 17.06.2023 ಎಲೆಬೇತೂರಿನಲ್ಲಿ ಕೆರೆ ಗಂಗಾಮಾತೆಗೆ ಪೂಜೆ](https://janathavani.com/wp-content/uploads/2023/06/19-yelebethur-ganga-poojenews-17.06.2023-860x437.jpg)