ದಾವಣಗೆರೆ, ಜೂ. 13- ನಗರದ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಅತಿಥಿ ಗೃಹದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಜಿಲ್ಲಾ ಸಹ ಪ್ರಭಾರಿ ಶಿವಲಿಂಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಜಿಲ್ಲಾ ಖಜಾಂಚಿ ಡಿ.ಆರ್. ವೀರೇಶ್, ಮುಖಂಡರಾದ ಹೆಚ್.ಎನ್. ಶಿವಕುಮಾರ್, ಜಿ.ಎಸ್. ಅನಿತ್ ಕುಮಾರ್, ಎನ್. ರಾಜಶೇಖರ್ ಮತ್ತಿತರರು ಭಾಗವಹಿಸಿದ್ದರು.
ಸಾರ್ವಜನಿಕರಿಂದ ಸಂಸದ ಸಿದ್ದೇಶ್ವರ ಅಹವಾಲು ಸ್ವೀಕಾರ
![sv 18 gms 14.06.2023 ಸಾರ್ವಜನಿಕರಿಂದ ಸಂಸದ ಸಿದ್ದೇಶ್ವರ ಅಹವಾಲು ಸ್ವೀಕಾರ](https://janathavani.com/wp-content/uploads/2023/06/sv-18-gms-14.06.2023-860x568.jpg)