ದಾವಣಗೆರೆ, ಜೂ.13- ಸ್ಥಳೀಯ ಶ್ರೀಶೈಲ ಮಠದ ವ್ಯವಸ್ಥಾಪಕ ಬನ್ನಯ್ಯ ಸ್ವಾಮಿ ಮತ್ತು ನಿವೃತ್ತ ಶಿಕ್ಷಕಿ ಶ್ರೀಮತಿ ಸುಧಾರಾಣಿ ದಂಪತಿಯ ಷಷ್ಠಿಪೂರ್ತಿ ಸಮಾರಂಭದ ಪ್ರಯುಕ್ತ ತುಲಾಭಾರ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಬನ್ನಯ್ಯಸ್ವಾಮಿ ದಂಪತಿಯನ್ನು ಆಶೀರ್ವದಿಸಿ, ಗುಣಗಾನ ಮಾಡಿದರು.
ಬನ್ನಯ್ಯ ಅವರು ಶ್ರೀ ಶ್ರೀಶೈಲ ಪೀಠದ ಸೇವೆ ಹಾಗೂ ಸಮಾಜ ಸೇವೆಯನ್ನೂ ಮಾಡುತ್ತಾ ಸಹಸ್ರ ಚಂದ್ರದರ್ಶನ ಪಡೆಯುವ ಭಾಗ್ಯ ಸಿಗಲಿ ಎಂದು ಶುಭ ಹಾರೈಸಿದರು.
ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಅಂಬಿಕಾ ನಗರ ಶ್ರೀ ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಮಹಾಸಭಾದ ಅಧ್ಯಕ್ಷ ದೇವರಮನಿ ಶಿವಕುಮಾರ್, ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕಿನ ಅಧ್ಯಕ್ಷ ಎನ್.ಎ.ಮುರುಗೇಶ್, ಹರಿಹರದ ಎಸ್ಜೆವಿಪಿ ಕಾಲೇಜಿನ ಉಪಾಧ್ಯಕ್ಷ ಡಿ.ಎಂ.ಹಾಲಸ್ವಾಮಿ, ಕಾರ್ಯದರ್ಶಿ ಆರ್.ಟಿ.ಪ್ರಶಾಂತ್ ದುಗ್ಗತ್ತಿಮಠ, ನಂದಿಗಾವಿ ತಿಪ್ಪೇಸ್ವಾಮಿ, ಎನ್.ಹೆಚ್.ಪಾಟೀಲ್, ಕೆ.ಎಂ.ಪರಮೇಶ್ವರಯ್ಯ, ಕೆ.ಎಂ.ಚನ್ನಬಸಯ್ಯ, ಟಿ.ಎಂ.ವಿನಾಯಕ, ಕೆ.ಹನುಮಂತಪ್ಪ, ಪಿಜಿಆರ್ ರಾಜಶೇಖರ್, ಡಾ. ಮಂಜುನಾಥ್ ದೊಗ್ಗಳ್ಳಿ, ಆರ್.ಎಂ.ಶಿವಕುಮಾರ್, ಆನೆ ಮಾವುತ ಬಾಬು ಹಾಗೂ ಇತರರು ಭಾಗವಹಿಸಿ, ದಂಪತಿಗೆ ಶುಭ ಕೋರಿದರು.