ಸ್ವಾಸ್ಥ್ಯ ಸಂಕಲ್ಪ ತರಬೇತುದಾರರ ತರಬೇತಿ ಕಾರ್ಯಾಗಾರ

ಸ್ವಾಸ್ಥ್ಯ ಸಂಕಲ್ಪ ತರಬೇತುದಾರರ ತರಬೇತಿ ಕಾರ್ಯಾಗಾರ

ದಾವಣಗೆರೆ, ಜೂ. 13- ಚಿತ್ರದುರ್ಗ ಪ್ರಾದೇಶಿಕ ವಿಭಾಗದ 4 ಜಿಲ್ಲಾ ವ್ಯಾಪ್ತಿಯ ಸ್ವಾಸ್ಥ್ಯ ಸಂಕಲ್ಪ ತರಬೇತುದಾರರ ತರಬೇತಿ ಕಾರ್ಯಾಗಾರವನ್ನು ಪ್ರಾದೇಶಿಕ ನಿರ್ದೇಶಕರಾದ ಬಿ. ಗೀತಾ ಉದ್ಘಾಟಿಸಿ, ಶುಭ ಹಾರೈಸಿದರು. 

ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಯಸ್ ಮಾತನಾಡಿ,  ಮಾದಕ ವಸ್ತುಗಳಲ್ಲಿ ಇರುವ ಹಾನಿಕಾರಕ ಪದಾರ್ಥಗಳು, ಮದ್ಯಪಾನದ ಬಗ್ಗೆ ತಿಳಿದುಕೊಳ್ಳಬೇಕಾದ ಸತ್ಯ, ಮದ್ಯಪಾನದಿಂದ ಶರೀರಕ್ಕೆ, ಕುಟುಂಬಕ್ಕೆ, ಸಮಾಜಕ್ಕೆ ಆಗುವ ದುಷ್ಪರಿಣಾಮಗಳು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಮನ ಪರಿವರ್ತನೆಯ ತರಗತಿ ನೀಡುವುದರೊಂದಿಗೆ ಸಾಧ್ಯ  ಎಂದು ತಿಳಿಸಿ, ಆರೋಗ್ಯ, ಸುರಕ್ಷತೆ ಮತ್ತು ಮದ್ಯಪಾನಕ್ಕೆ ಪರಿಹಾರಗಳ ಬಗ್ಗೆ ಉಪನ್ಯಾಸ ನೀಡಿದರು.

error: Content is protected !!