ಉಪಾಧ್ಯಕ್ಷರಾಗಿ ಜಿಗಳಿಯ ಎಂ.ವಿ.ನಾಗರಾಜ್ ಆಯ್ಕೆ
ಮಲೇಬೆನ್ನೂರು, ಜೂ.12- ಇಲ್ಲಿನ ಪ್ರತಿಷ್ಠಿತ ಶ್ರೀ ನಂದಿ ಸೌಹಾರ್ದ ಸಹಕಾರಿ ನಿಯಮಿತದ ನೂತನ ಅಧ್ಯಕ್ಷರಾಗಿ ಹಳ್ಳಿಹಾಳ್ ಹೆಚ್.ಟಿ.ಶಾಂತನಗೌಡ್ರು ಮತ್ತು ಉಪಾಧ್ಯಕ್ಷರಾಗಿ ಜಿಗಳಿಯ ಎಂ.ವಿ.ನಾಗರಾಜ್ ಅವರು ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ. ಜಿಗಳಿಯ ಇಂದೂಧರ್ ಮತ್ತು ಹಿಂಡಸ ಘಟ್ಟಿಯ ಶ್ರೀಮತಿ ಸೌಭಾಗ್ಯ ಉದಯಕುಮಾರ್ ಅವರುಗಳ ರಾಜೀನಾಮೆಯಿಂದಾಗಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು ತೆರವಾಗಿದ್ದವು.
ಲೆಕ್ಕ ಪರಿಶೋಧನಾ ಇಲಾಖೆಯ ಹಿರಿಯ ಲೆಕ್ಕ ಪರಿಶೋಧಕ ಮಂಜುನಾಥ ಸ್ವಾಮಿ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಸಹಕಾರಿಯ ನಿರ್ದೇಶಕರಾದ ಜಿಗಳಿಯ ಎನ್.ಆರ್.ಇಂದೂಧರ್, ಗೌಡ್ರ ಬಸವರಾಜಪ್ಪ, ಹಿಂಡಸಘಟ್ಟಿಯ ಸೌಭಾಗ್ಯ ಉದಯಕುಮಾರ್, ಹಳ್ಳಿಹಾಳ ಹೆಚ್.ವೀರನಗೌಡ, ಹೆಚ್.ಟಿ.ಪರಮೇಶ್ವರಪ್ಪ, ಎ.ಕೆ.ತಿಪ್ಪೇಶಪ್ಪ, ಕೊಕ್ಕನೂರಿನ ಕೆ.ಪಿ.ಆಂಜನೇಯ ಪಾಟೀಲ್, ಬಿ.ಹೆಚ್.ರವಿ, ಟಿ.ರಾಜು ಚಂದ್ರಪ್ಪ, ಜಿ.ಬೇವಿನಹಳ್ಳಿಯ ಶ್ರೀಮತಿ ಶೋಭಾ ಬಿ.ಪಿ.ಪಾಲಾಕ್ಷಪ್ಪ, ಸಂತೋಷ್ ಪಾಳ್ಯದ್, ಮಲೇಬೆನ್ನೂರಿನ ಎ.ಆರೀಫ್ ಅಲಿ, ಸಹಕಾರಿಯ ಸಿಇಓ ಬಸವರಾಜಪ್ಪ ಈ ವೇಳೆ ಹಾಜರಿದ್ದರು.