ಎಸ್ಸೆಸ್‌ ಜನ್ಮ ದಿನ : ಕ್ರಿಕೆಟ್ ಪಂದ್ಯಾವಳಿ ಆರಂಭ

ಎಸ್ಸೆಸ್‌ ಜನ್ಮ ದಿನ : ಕ್ರಿಕೆಟ್ ಪಂದ್ಯಾವಳಿ ಆರಂಭ

ದಾವಣಗೆರೆ, ಜೂ. 13 – ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅವರ 93ನೇ ಜನ್ಮ ದಿನದ ಪ್ರಯುಕ್ತ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದ ಮಹಾನಗರ ಪಾಲಿಕೆ ಸದಸ್ಯ ಜಿ.ಎಸ್.ಮಂಜುನಾಥ್, ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಉದ್ಯಮಿ ಶಿವಗಂಗಾ ಶ್ರೀನಿವಾಸ್ ಅವರು ಮಾತನಾಡಿ, ಕಳೆದ 22 ವರ್ಷಗಳಿಂದ ಜನಪ್ರಿಯ ಕ್ರಿಕೆಟ್ ಕ್ಲಬ್ ವತಿಯಿಂದ ಕ್ರಿಕೆಟ್ ಪಂದ್ಯಾ ವಳಿಗಳನ್ನು ಆಯೋಜಿಸುತ್ತಿ ರುವುದನ್ನು ಶ್ಲ್ಯಾಘಿಸಿದರು. 

ಈ ಸಂದರ್ಭದಲ್ಲಿ ರಾಜು ರೆಡ್ಡಿ, ವಿಷ್ಣು ರೆಡ್ಡಿ, ಹೆಚ್.ಮಹಾದೇವ್, ರಂಗಸ್ವಾಮಿ, ಶಿವಣ್ಣ, ಕುರುಡಿ ಗಿರೀಶ್ (ಸ್ವಾಮಿ), ಜಯಪ್ರಕಾಶ್, ಹಾಲಪ್ಪ, ಚಂದ್ರು, ಪ್ರಕಾಶ್, ಜನಪ್ರಿಯ ತಂಡ ಸೇರಿದಂತೆ ವಿವಿಧ ಕ್ರಿಕೆಟ್ ತಂಡಗಳ ಆಟಗಾರರು ಉಪಸ್ಥಿತರಿದ್ದರು.

error: Content is protected !!