ದಾವಣಗೆರೆ, ಜೂ. 12- ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜಿನ ಇಕೋ ಕ್ಲಬ್ ವತಿಯಿಂದ ಮಾಗನೂರು ಬಸಪ್ಪ ಪಿ ಯು ಕಾಲೇಜಿನ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸ ಲಾಯಿತು. ಇಡೀ ವಿಶ್ವವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು `ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಗಟ್ಟಿ’ ಎಂಬ ಧ್ಯೇಯ ವಾಕ್ಯದ ಹಿನ್ನೆಲೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಸಸಿಗಳಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿ ಹೆಚ್.ಆರ್. ಭರತ್, ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಕಾಲೇಜಿನ ಇಕೋ ಕ್ಲಬ್ನ ಮುಖ್ಯಸ್ಥ ಎಸ್.ಆರ್. ಸಿದ್ದೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಪ್ರಸಾದ್ ಎಸ್. ಬಂಗೇರ ಉಪಸ್ಥಿತರಿದ್ದರು. ಕಾಲೇಜಿನ ಇಕೋ ಕ್ಲಬ್ನ ಸದಸ್ಯರುಗಳಾದ ಶ್ರೀಮತಿ ಆರ್. ಮಮತ ನಿರೂಪಿಸಿದರು. ಡಾ. ಬಿ.ವಿ. ರವಿಶಂಕರ್ ವಂದಿಸಿದರು.