ದಾವಣಗೆರೆ, ಜೂ.13- ನಗರದ ತರಳಬಾಳು ವಿದ್ಯಾಸಂಸ್ಥೆ ಅನುಭವ ಮಂಟಪ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ 1992-93 ನೇ ಸಾಲಿನಲ್ಲಿ ಅಭ್ಯಾಸ ಮಾಡಿದ್ದ ಹಳೆಯ ವಿದ್ಯಾರ್ಥಿಗಳು ಸುಮಾರು 30 ವರ್ಷಗಳ ನಂತರ ನಗರದ ಸಿರಿಮನೆ ಕುಟೀರದಲ್ಲಿ `ಸ್ನೇಹ ಸಮ್ಮಿಲನ’ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ತಮ್ಮ ವಿದ್ಯಾರ್ಥಿ ಜೀವನದ ಹಳೆಯ ಸವಿ ನೆನಪುಗಳನ್ನು ಪರಸ್ಪರರು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದರು.
ಅನುಭವ ಮಂಟಪ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ
![sv 01 anubhva mantapa 14.06.2023 ಅನುಭವ ಮಂಟಪ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ](https://janathavani.com/wp-content/uploads/2023/06/sv-01-anubhva-mantapa-14.06.2023-860x416.jpg)