ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆಯ ಜಾಗೃತಿ ಮೂಡಿಸುವ ಜಾಥಾಗೆ ಜೆ.ಎಂ.ಎಫ್.ಸಿ ಹಾಗೂ ಜಿಲ್ಲಾ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಅಪ್ತಾಬ್ ಮತ್ತು 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಪ್ರಶಾಂತ್ ಜಿ.ಸಿ ಚಾಲನೆ ನೀಡಿದರು. ಮಕ್ಕಳಿಗೆ ಶಿಕ್ಷಣ ಕೊಡಿ, ಶಿಕ್ಷೆ ಕೊಡಬೇಡಿ, ಇಂದಿನ ಮಕ್ಕಳೇ ನಾಳಿನ ದೇಶದ ಭವಿಷ್ಯ, ಬೆಳೆಯಲಿ ಶಿಕ್ಷಣದ ಮೊಗ್ಗು ಚಿಗುರಲಿ ಎಂಬ ಘೋಷವಾಕ್ಯಗಳನ್ನು ಕೂಗುತ್ತಾ ಭಾಷಾನಗರ, ಮಂಡಕ್ಕಿ ಭಟ್ಟಿ ಮೂಲಕ ಜಾಥಾವು ಮಿಲ್ಲತ್ ವಿದ್ಯಾಲಯದಲ್ಲಿ ಸಮಾಪನೆಗೊಂಡಿತು.
ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ : ಜಾಗೃತಿ ಜಾಥಾ
![SV21 blaa karmika news 13.06.2023.jpg ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ : ಜಾಗೃತಿ ಜಾಥಾ](https://janathavani.com/wp-content/uploads/2023/06/SV21-blaa-karmika-news-13.06.2023.jpg-860x480.jpg)