ದಾವಣಗೆರೆ, ಮೇ 28- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾಪಟು ಖೇಲೋ ಇಂಡಿಯಾ ಗ್ರಿಕೋ ರೋಮನ್ ಕುಸ್ತಿ ಪಂದ್ಯಾವಳಿಯಲ್ಲಿ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ.
ಕಾಶಿನಾಥ್ ಬೀಳಗಿ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾದ ರೇಖಾ ಅವರನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಅಂಜನಪ್ಪ ಕ್ರೀಡಾ ಸಮಿತಿ ಸದಸ್ಯರಾದ ಪ್ರೊ. ಭೀಮಣ್ಣ. ಸುಣಗಾರ, ಡಾ. ನಾರಾಯಣಸ್ವಾಮಿ , ಡಾ. ಸದಾಶಿವ, ಡಾ. ಯಶೋಧ ಪ್ರೊ. ವೆಂಕಟೇಶ ಬಾಬು, ಪ್ರೊ. ಜ್ಯೋತಿ ಪತ್ರಾಂಕಿತ, ವ್ಯವಸ್ಥಾಪಕರಾದ ಗೀತಾದೇವಿ ಅಭಿನಂದಿಸಿದ್ದಾರೆ.