ದಾವಣಗೆರೆ, ಮೇ 26- ಕೇಂದ್ರೀಯ ಸಶಸ್ತ್ರ ತುಕಡಿ ನಗರದ ಪೊಲೀಸ್ ಠಾಣೆಗಳಿಗೆ ಇಂದು ಭೇಟಿ ನೀಡಿ, ಆ ಠಾಣೆಗಳ ವ್ಯಾಪ್ತಿಯಲ್ಲಿ ಅಧ್ಯಯನ ಮಾಡಿತು. ನಂತರ ಅಕ್ತರ್ ರಜಾ ವೃತ್ತದಿಂದ ಬಾಷಾ ನಗರ, ಆಜಾದ್ ನಗರ, ಹಳೆ ಬೇತೂರು ರಸ್ತೆ, ದುಗ್ಗಮ್ಮ ದೇವಸ್ಥಾನ, ಹೊಂಡದ ವೃತ್ತದವರೆಗೆ ಪಥ ಸಂಚಲನ ನಡೆಸಿತು. ಪಥ ಸಂಚಲನದಲ್ಲಿ ಸೆಕೆಂಡ್ ಇನ್ ಕಮಾಂಡೆಂಟ್ ಶ್ರೀಮತಿ ನಾಗರಾಜಮ್, ಆಜಾದ್ ನಗರ ಪೊಲೀಸ್ ನಿರೀಕ್ಷಕರಾದ ಇಮ್ರಾನ್ ಬೇಗ್, ಪಿ.ಎಸ್.ಐ ಕಾಂತರಾಜ್, ಶಿವಕುಮಾರ್, ಜಯಪ್ರಕಾಶ್ ಇದ್ದರು.
July 6, 2024