ನಾಳೆ `ಚಿರಂತನ ಉತ್ಸವ’ ನೃತ್ಯ-ಸಂಗೀತ ಹಬ್ಬ

ನಾಳೆ `ಚಿರಂತನ ಉತ್ಸವ’ ನೃತ್ಯ-ಸಂಗೀತ ಹಬ್ಬ

ಸಮಾರಂಭದಲ್ಲಿ ರಾಜ್ಯದ ಸುಮಾರು 15 ಕ್ಕೂ ಹೆಚ್ಚು ವಿಶೇಷ ಮಹಿಳಾ ಸಾಧಕಿಯರಿಗೆ `ಕರ್ನಾಟಕ ವುಮೆನ್ಸ್ ಎಕ್ಸಲೆನ್ಸ್’ ಅವಾರ್ಡ್ ನೀಡಿ ಗೌರವ.

-ದೀಪಾ ಎನ್. ರಾವ್,  ಅಧ್ಯಕ್ಷರು, ಚಿರಂತನ ಸಾಂಸ್ಕೃತಿಕ ಸಂಸ್ಥೆ

ದಾವಣಗೆರೆ, ಮೇ 26- ನಗರದ ಚಿರಂತನ ಸಂಸ್ಥೆಯ 21 ನೇ ವರ್ಷದ ಸಾರ್ಥಕ ಸಂಭ್ರಮದ ಪ್ರಯುಕ್ತ `ಚಿರಂತನ ಉತ್ಸವ’ ನೃತ್ಯ ಹಾಗೂ ಸಂಗೀತ ಹಬ್ಬ ಕಾರ್ಯಕ್ರಮ ನಾಡಿದ್ದು ದಿನಾಂಕ 28 ರ ಭಾನುವಾರ ಸಂಜೆ 6 ಗಂಟೆಗೆ ನಗರದ ಬಾಪೂಜಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಚಿರಂತನ ಸಂಸ್ಥೆ ಅಧ್ಯಕ್ಷರಾದ ಶ್ರೀಮತಿ ದೀಪಾ ಎನ್. ರಾವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಚಿರಂತನ ಉತ್ಸವದ ಮುಖ್ಯ ಅತಿಥಿಗಳಾಗಿ ಶಾಸಕ ಶಾಮನೂರು ಶಿವಶಂಕರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ ಛಲವಾದಿ, ಖ್ಯಾತ ನೃತ್ಯಗಾರ ಅಶ್ವಥ್ ಹರಿತನ್, ಉದ್ಯಮಿ ಅಥಣಿ ವೀರಣ್ಣ, ಎಸ್.ಎಸ್. ಕೇರ್ ಟ್ರಸ್ಟ್ ಸದಸ್ಯರಾದ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಉದ್ಯಮಿ ಹೇಮಾ ನಿರಂಜನ್ ಭಾಗವಹಿಸಲಿದ್ದಾರೆಂದರು.

100 ಕ್ಕೂ ಹೆಚ್ಚು ಕಲಾವಿದರು ಸಂಗಿತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಚಿರಂತನ ಕಲಾವಿದರಿಂದ ಮಹಿಷ ಮರ್ದಿನಿ ನೃತ್ಯ ರೂಪಕ ಪ್ರಸ್ತುತಪಡಿಸಲಾಗುವುದು. ಬೆಂಗಳೂರು ಏಕ್ಯಂ ತಂಡದವರು ಶಿವೊಹಂ ನೃತ್ಯ ರೂಪಕ ನಡೆಸಿಕೊಡಲಿದ್ದಾರೆಂದು ಹೇಳಿದರು.

ಮಹಿಳಾ ದಿನಾಚರಣೆ ಅಂಗವಾಗಿ ಕರ್ನಾಟಕ ವುಮೆನ್ ಎಕ್ಸಲೆನ್ಸ್ ಅವಾರ್ಡ್ ಕರ್ನಾಟಕ ಮಹಿಳಾ ಶ್ರೇಷ್ಠ ಸಾಧಕಿ ಪ್ರಶಸ್ತಿಯ 2023 ನೇ ಆವೃತ್ತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸ್ಥಳೀಯ ಸಾಧಕರಾದ ಶಿಕ್ಷಣ ಕ್ಷೇತ್ರದಲ್ಲಿ ಜಸ್ಟಿನ್ ಡಿಸೋಜ, ಸಮಾಜ ಸೇವಾ ಕ್ಷೇತ್ರದ ಅಲಕಾನಂದ ರಾಮದಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಲಕ್ಷ್ಮಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜೀವಮಾನ ಸಾಧನೆ ಪ್ರಶಸ್ತಿಯನ್ನು ಕಿರುವಾಡಿ ಗಿರಿಜಮ್ಮ ಅವರಿಗೆ ಪ್ರದಾನ ಮಾಡುವುದಾಗಿ ದೀಪಾ ವಿವರಿಸಿದರು.

error: Content is protected !!