ಬಿ.ಪಿ.ಹರೀಶ್ ಹುಟ್ಟುಹಬ್ಬ ಆಚರಣೆ

ಬಿ.ಪಿ.ಹರೀಶ್ ಹುಟ್ಟುಹಬ್ಬ ಆಚರಣೆ

ವಿವಿಧ ದೇವಸ್ಥಾನಗಳಲ್ಲಿ ಇಂದು ವಿಶೇಷ ಪೂಜೆ

ಹರಿಹರ, ಮೇ 11 – ಶುಕ್ರವಾರ ಮಾಜಿ ಶಾಸಕ ಬಿ.ಪಿ.ಹರೀಶ್ ಹುಟ್ಟು ಹಬ್ಬದ ಅಂಗವಾಗಿ ತಾಲ್ಲೂಕಿನ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳ ಲಾಗಿದೆ ಎಂದು ಬಿಜೆಪಿ ನಗರ ಘಟಕ ಪ್ರಧಾನ ಕಾರ್ಯದರ್ಶಿ ಹೆಚ್.ಮಂಜನಾಯ್ಕ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು, ಮಾಜಿ ಶಾಸಕ ಬಿಜೆಪಿ ಅಭ್ಯರ್ಥಿ ಹರೀಶ್ ಹುಟ್ಟು ಹಬ್ಬದ ಅಂಗವಾಗಿ ನಗರದ ಎಲ್ಲಾ ವಾರ್ಡ್‌ಗಳಲ್ಲಿ ಮತ್ತು ತಾಲ್ಲೂಕಿನ ಪ್ರತಿ ಗ್ರಾಮದ ದೇವಾಲಯಗಳಲ್ಲಿ ಆಯಾ ಭಾಗದ ಬಿಜೆಪಿ ಪ್ರತಿನಿಧಿಗಳು ವಿಶೇಷ ಪೂಜೆ ನೆರವೇರಿಸಲಿದ್ದಾರೆ. ಅಲ್ಲದೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿನ ಒಳ ರೋಗಿಗಳಿಗೆ ಹಣ್ಣು, ಹಾಲು ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ದೂಡಾ ಸದಸ್ಯ ಬಾತಿ ಚಂದ್ರಶೇಖರ್,  ರಾಜು ರೋಖಡೆ, ಮಲತೇಶ್ ಭಂಡಾರಿ, ಪ್ರಧಾನ ಕಾರ್ಯದರ್ಶಿಗಳಾದ ಮಂಜನಾಯ್ಕ ಹೆಚ್. ತುಳಜಪ್ಪ ಭೂತೆ, ನಗರಸಭಾ ಸದಸ್ಯ ಎ.ಕೆ.ಹನುಮಂತಪ್ಪ ಆಟೋ, ಮುಖಂಡರಾದ ಸುನೀಲ್ ಕುಮಾರ್, ವೀರೇಶ್ ಅಚಾರ್, ರಾಜೇಶ್ ವರ್ಣೆಕರ್, ಭರತ್ ಶೆಟ್ಟಿ, ಕಿರಣ್ ಉಯೀಲ್ ಗೋಳ್, ಗೀರೀಶ್ ಹೆಚ್. ಮತ್ತಿತರರು ಉಪಸ್ಥಿತರಿದ್ದರು.

error: Content is protected !!