ವಿದ್ಯಾರ್ಥಿಗಳ ಮತದಾನ ಜಾಗೃತಿ ಜಾಥಾ

ವಿದ್ಯಾರ್ಥಿಗಳ ಮತದಾನ ಜಾಗೃತಿ ಜಾಥಾ

ದಾವಣಗೆರೆ, ಮೇ 9- ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸೂಚನೆ ಮೇರೆಗೆ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ನಗರದಲ್ಲಿ ‘ನಮ್ಮ ನಡೆ ಮತಗಟ್ಟೆ ಕಡೆ’ ಎಂಬ ಘೋಷವಾಕ್ಯದೊಂದಿಗೆ ನಡೆಸಿದ ಸ್ವೀಪ್ ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ಬಿಇಓ ದಾರುಕೇಶ್ ಚಾಲನೆ ನೀಡಿದರು. ಇಲ್ಲಿನ ಮಾಗನೂರು ಬಸಪ್ಪ ಕಾಲೇಜಿನಿಂದ ಮತದಾರರ ಜಾಥಾ ನಡೆಸಿ, ಪ್ರತಿಜ್ಞಾ ವಿಧಿ ಬೋಧಿಸಿ, ಮತದಾನ ಜಾಗೃತಿ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಮತದಾನದ ಅರಿವು ಮೂಡಿಸಲಾ ಯಿತು. ಈ ಸಂದರ್ಭದಲ್ಲಿ ನಿಲಯಪಾಲಕರಾದ ಕೆ.ಸಿ.ಸುಧಾ, ಬಿ.ಕೆ.ಶಶಿಕಲಾ ಮತ್ತಿತರರು ಪಾಲ್ಗೊಂಡಿದ್ದರು.

error: Content is protected !!