ಮಲೇಬೆನ್ನೂರು ಸಂತೆಯಲ್ಲಿ ಮತದಾನ ಜಾಗೃತಿ

ಮಲೇಬೆನ್ನೂರು ಸಂತೆಯಲ್ಲಿ ಮತದಾನ ಜಾಗೃತಿ

ಮಲೇಬೆನ್ನೂರು, ಏ.13- ಇಲ್ಲಿನ ಪುರಸಭೆ ವತಿಯಿಂದ ಗುರುವಾರ ಪಟ್ಟಣದಲ್ಲಿ ನಡೆದ ವಾರದ ಸಂತೆಯಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು.

ಸಂತೆಗೆ ಆಗಮಿಸಿದ್ದ ವರ್ತಕರಿಗೆ ಹಾಗೂ ಹಳ್ಳಿ ಜನರಿಗೆ ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಉಳಿಸಿ ಎಂದು ಕರ ಪತ್ರ ನೀಡಿ ಮನವಿ ಮಾಡಲಾಯಿತು.

ಪುರಸಭೆ ಮುಖ್ಯಾಧಿಕಾರಿ ಎಂ. ಸುರೇಶ್‌, ಪುರಸಭೆ ಅಧಿಕಾರಿಗಳಾದ ಏಕನಾಥ್‌, ದಿನಕರ್‌, ಉಮೇಶ್‌, ಪ್ರಭು, ಹಾಲೇಶಪ್ಪ, ನವೀನ್‌ ಸೇರಿದಂತೆ ಪುರಸಭೆ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಮತದಾನ ಜಾಗೃತಿಯಲ್ಲಿ ಹಾಜರಿದ್ದರು. 

error: Content is protected !!