20ನೇ ಶತಮಾನದ ಅಪ್ರತಿಮ ಚೇತನ

ದಾವಣಗೆರೆ, ಸೆ.25- ಸಾಮಾಜಿಕ, ಶೈಕ್ಷಣಿಕ ಹಾಗೂ ಎಲ್ಲಾ ವರ್ಗಗಳ ಹರಿಕಾರರಾಗಿ ಅಹರ್ನಿಷಿ ಶ್ರಮಿಸಿದ ಸಿರಿಗೆರೆಯ ತರಳಬಾಳು ಬೃಹನ್ಮಠದ ಹಿರಿಯ ಚೇತನ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರ 28ನೇ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಪ್ರಯುಕ್ತ  ನಗರದ ಶ್ರೀ ಮಾಗನೂರು ಬಸಪ್ಪ ರಸ್ತೆಯಲ್ಲಿರುವ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದ ಆವರಣದಲ್ಲಿ ಸ್ಥಾಪನೆಗೊಂಡಿರುವ ಶ್ರೀಗಳ ಮೂರ್ತಿಗೆ ಶ್ರೀಮದ್‌ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷರೂ ಆದ ರಾಜ್ಯಸಭಾ ಮಾಜಿ ಸದಸ್ಯ ಕೆ.ಆರ್. ಜಯದೇವಪ್ಪ ಅವರ ನೇತೃತ್ವ ದಲ್ಲಿ ಶ್ರದ್ಧಾಭಕ್ತಿಯ ಪುಷ್ಪನಮನ ಸಲ್ಲಿಸಲಾಯಿತು. 

ಶ್ರೀಮದ್‌ ಸಾಧು ಸದ್ಧರ್ಮ ವೀರಶೈವ ಸಂಘದ ಕಾರ್ಯದರ್ಶಿಗಳಾದ ಬಸವರಾಜಪ್ಪ ಶಿವಪ್ಪರ, ಬಿ. ವಾಮದೇವಪ್ಪ, ಬಿ.ಎಂ. ಸದಾಶಿವಪ್ಪ ಶ್ಯಾಗಲೆ, ಬಾಡದ ಜಿ.ಆರ್. ಷಣ್ಮುಖಪ್ಪ, ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದ ಆಡಳಿತಾಧಿಕಾರಿ ವೈ. ವಸಂತಪ್ಪ, ಶಶಿಧರ ಹೆಮ್ಮನಬೇತೂರು, ಹೆಚ್‌. ಜಯಣ್ಣ, ಆರ್‌.ಜಿ. ರುದ್ರೇಶ್, ಕೊರಟೀಕೆರೆ ಡಿ.ಎಂ. ಶಿವಕುಮಾರ್, ಸಿಂಗಾಪುರದ ಪರಮೇಶಣ್ಣ, ಕಾಕನೂರು ಪ್ರಭು, ಕಾವಲಹಳ್ಳಿ ಪ್ರಭು, ಹರಿಶ್‌, ಸತೀಶ್‌ ಬೆಳವನೂರು, ಸುರೇಶ್‌, ಮಳಲಕೆರೆ ಸದಾಶಿವಪ್ಪ, ಹಾಲೇಶ್ ಕಂಸಾಗರ  ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!