ದಾವಣಗೆರೆ, ಸೆ. 22 – ಎಸ್ಎಸ್ಎಲ್ಸಿಯಲ್ಲಿ ಜಿಲ್ಲೆಯಲ್ಲಿ ಹೆಚ್ಚು ಅಂಕ ಗಳಿಸಿದ ಏಳು ವಿದ್ಯಾರ್ಥಿಗಳಿಗೆ ತಾಲ್ಲೂಕು ಪಂಚಾಯ್ತಿ ವತಿಯಿಂದ ಸನ್ಮಾನಿಸಲಾಯಿತು. ನಗರದ ಅಂಧ ಮಕ್ಕಳ ಶಾಲೆಯ ಜಿ.ಟಿ. ಕಿರಣ್ ಕುಮಾರ್, ಕಕ್ಕರಗೊಳ್ಳದ ಶ್ರೇಯ, ದಾವಣಗೆರೆಯ ಹೆಚ್.ವಿ. ಅಮೃತ, ಆರ್. ಆಕಾಶ್, ಸಂಹಿತಾ, ಜ್ಞಾನಶ್ರೀ ಹಾಗೂ ಹೆಚ್. ಬಸಾಪುರದ ಕೀರ್ತನ ಅವರನ್ನು ಸನ್ಮಾನಿಸಲಾಯಿತು.
ಜಿ.ಪಂ. ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಉಪಾಧ್ಯಕ್ಷೆ ಮೀನಾ ಶ್ರೀನಿವಾಸ್, ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳ ಅಣಬೇರು ಶಿವಮೂರ್ತಿ, ತಾ.ಪಂ. ಸಿಇಒ ಬಿ.ಎಂ. ದಾರುಕೇಶ್, ತಾ.ಪಂ. ಸದಸ್ಯರು ಉಪಸ್ಥಿತರಿದ್ದರು.