ದಾವಣಗೆರೆ, ಏ. 3- ಅಖಿಲ ಭಾರತ ವೀರಶೈವ ಮಹಾಸಭಾ ದಾವಣಗೆರೆ ತಾಲ್ಲೂಕು ಘಟಕದ ವತಿಯಿಂದ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿಗಳ 118 ನೇ ಜಯಂತಿಯನ್ನು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಗೌರವಾಧ್ಯಕ್ಷ ಎಸ್.ಜಿ. ಉಳುವಯ್ಯ, ಗಿರೀಶ್ ಗೌಡ್ರು ಕಕ್ಕರಗೊಳ್ಳ, ಕುರುಡಿ ಗಿರೀಶ್, ಜಿ.ಜೆ. ನಯನ್, ಎಸ್ .ಎಂ. ಆದರ್ಶ್ ಮತ್ತಿತರರು ಹಾಜರಿದ್ದರು.