ದಿವ್ಯಾಂಗರಿಗೆ ಸರ್ಕಾರದಿಂದ ಸೂಕ್ತ ಅವಕಾಶ : ಜಿಲ್ಲಾಧಿಕಾರಿ

ದಿವ್ಯಾಂಗರಿಗೆ ಸರ್ಕಾರದಿಂದ ಸೂಕ್ತ ಅವಕಾಶ : ಜಿಲ್ಲಾಧಿಕಾರಿ

ದಾವಣಗೆರೆ, ಫೆ.25- ದಿವ್ಯಾಂಗರಿಗೆ ತಮ್ಮ ಜೀವನದಲ್ಲಿ ಶಕ್ತಿ ಮತ್ತು ಧೈರ್ಯವನ್ನು ಹೊಂದಿ ಆತ್ಮವಿ ಶ್ವಾಸದಿಂದ ಬದುಕಲು ಸರ್ಕಾರ ಎಲ್ಲಾ ರೀತಿಯ ಅವಕಾಶಗಳನ್ನು ಕಲ್ಪಿಸಿದೆ. ದಿವ್ಯಾಂಗರು ಸಾಮಾನ್ಯ ಜನರಂತೆ ಬದುಕು ನಡೆಸಬೇಕು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಹೇಳಿದರು.

ದಿವ್ಯಾಂಗರ ಕೌಶಲ್ಯಾಭಿವೃದ್ಧಿ ಪುನರ್ವಸತಿ ಮತ್ತು ಸಬಲೀಕರಣದ ಸಂಯುಕ್ತ ಪ್ರಾದೇಶಿಕ ಕೇಂದ್ರದ ವತಿಯಿಂದ ನಗರದ ಪ್ರಾದೇಶಿಕ ಕೇಂದ್ರದಲ್ಲಿ ಅಂಗನವಾಡಿ ಶಿಕ್ಷಕರಿಗಾಗಿ ಪೂರ್ವಭಾವಿ ಮಧ್ಯಸ್ಥಿಕೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ, ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು. 

ಸಿಆರ್‌ಸಿ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಪ್ರತಿಷ್ಠಿತ ಸಂಸ್ಥೆಯಾಗಿದೆ. ದಿವ್ಯಾಂಗ ವ್ಯಕ್ತಿಗಳ ಕಲ್ಯಾಣಕ್ಕಾಗಿ ಭಾರತ ಸರ್ಕಾರದ ವತಿಯಿಂದ ಸ್ಥಾಪಿಸಲ್ಪಟ್ಟ ಸಿಆರ್‌ಸಿ, 21 ವಿಧದ ದಿವ್ಯಾಂಗರ ಮತ್ತು ಜನರ ಅಗತ್ಯತೆಗಳನ್ನು ನೋಡಿಕೊಳ್ಳುತ್ತಿದೆ. ಅಂಗವಾಡಿ ಶಿಕ್ಷಕರಾಗಿರುವ ನೀವು ಪ್ರಸವಪೂರ್ವ ಮತ್ತು ನಂತರದ ಆರೈಕೆಗಾಗಿ ನಿಕಟವಾಗಿ ಕೆಲಸ ಮಾಡುತ್ತಿರುವುದನ್ನು ಅವರು ಶ್ಲ್ಯಾಘಿಸಿದರು.  

ಮಕ್ಕಳು ಯಾವುದೇ ರೀತಿಯ ದಿವ್ಯಾಂಗತೆಗೆ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಸಹಾಯದ ಅಗತ್ಯವಿರುವ ಹಿರಿಯ ನಾಗರಿಕರು  ಸೂಕ್ತ ಸಹಾಯ ಹಾಗೂ ಪ್ರಯೋಜನ ಪಡೆಯಲು ಸಿಆರ್‌ಸಿಗೆ ಭೇಟಿ ನೀಡುವಂತೆ ಅವರಿಗೆ ತಿಳಿಸಬೇಕು ಎಂದರು. 

ಮಗುವಿನ ಚಿಕ್ಕ ವಯಸ್ಸಿನಲ್ಲಿ ಯಾವುದೇ ಅಂಗವೈಕಲ್ಯವನ್ನು ಗುರುತಿ ಸಿದರೆ, ಅದನ್ನು ಗುಣಪಡಿಸಬಹುದು ಮತ್ತು ಸಿಆರ್‌ಸಿಯು ಅವರನ್ನು ಸಾಮಾನ್ಯ ಸ್ಥಿತಿಗೆ ತರಲು ಶ್ರಮಿಸುತ್ತದೆ ಎಂದು ತಿಳಿಸಿದರು. 

ಇದೇ ವೇಳೆ ಅವರು ಅಂಗನವಾಡಿ ಶಿಕ್ಷಕರಿಗೆ ಆರಂಭಿಕ ಮಧ್ಯಸ್ಥಿಕೆ ಜಾಗೃತಿ ಮೂಡಿಸುವ ಕಿಟ್‌ಗಳ ವಿತರಣೆ ಹಾಗೂ ವಿವಿಧ ದಿವ್ಯಾಂಗರಿಗೆ 120  ಸಹಾಯಕ ಸಾಧನಗಳನ್ನು ವಿತರಿಸಲಾಯಿತು.  

ಸಿಆರ್‌ಸಿ ನಿರ್ದೇಶಕರಾದ ಮೀನಾಕ್ಷಿ ಮಾತ ನಾಡಿ, ಬಿಪಿಎಲ್ ವರ್ಗದವರಿಗೆ ಮತ್ತು ಹಿರಿಯ ನಾಗರಿಕರಿಗೆ ವಿಕಲಚೇತನರಿಗೆ ಅಗತ್ಯವಿರುವ ಎಲ್ಲಾ ಸಹಾಯ ಮತ್ತು ಉಪಕರಣಗಳನ್ನು ಉಚಿತ ವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು. 

ಸಿಆರ್‌ಸಿ ಆಡಳಿತಾಧಿಕಾರಿ ವೈ.ಶ್ರೀನಾಥ್ ಮತ್ತು ಇತರರು ಭಾಗವಹಿಸಿದ್ದರು.

error: Content is protected !!