ಕಾಂಗ್ರೆಸ್ ಸೇವಾದಳದ ಧ್ವಜ ವಂದನಾ ಕಾರ್ಯಕ್ರಮದಲ್ಲಿ ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ
ದಾವಣಗೆರೆ, ಫೆ. 23 – ಜಾತ್ಯತೀತ ಭಾರತ ದೇಶಕ್ಕೆ ಜಾತಿ-ಧರ್ಮದ ಮಧ್ಯ ವೈರುದ್ಯ ಬೆಳೆಸುವ ಆರ್.ಎಸ್.ಎಸ್. ನಂತಹ ಸಂಘಟನೆಗಳಿಗಿಂತ ಪ್ರತಿಯೊಂದು ಜಾತಿ-ಧರ್ಮದವರನ್ನು ಸಮನಾಗಿ ಕಾಣುವ ಕಾಂಗ್ರೆಸ್ ಪಕ್ಷದ ಸೇವಾದಳದಂತಹ ಸಂಘಟನೆಗಳ ಅವಶ್ಯಕತೆ ಇದೆ ಎಂದು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹೇಳಿದರು.
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಸೇವಾದಳದ ವತಿಯಿಂದ ಇಂದು ಏರ್ಪಾಡಾಗಿದ್ದ ಧ್ವಜ ವಂದನಾ ಕಾರ್ಯಕ್ರಮದಲ್ಲಿ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಭಾರತ ದೇಶ ಸ್ವಾತಂತ್ರ್ಯ ಪೂರ್ವ ಮತ್ತು ನಂತರ ಎಲ್ಲಾ ಜಾತಿ ಧರ್ಮಗಳನ್ನೊಳಗೊಂಡ ದೇಶವಾಗಿದ್ದು, ಪ್ರತಿಯೊಬ್ಬರು ಸಾಮರಸ್ಯದ ಜೀವನ ಸಾಗಿಸುತ್ತಿದ್ದಾರೆ. ಅಂತಹ ದೇಶದಲ್ಲಿ ಹುಟ್ಟಿದ ಆರ್.ಎಸ್.ಎಸ್. ಎಂಬ ಸಂಘಟನೆ ಹಿಂದೂ ಧರ್ಮವನ್ನು ರಕ್ಷಣೆ ಎಂದು ಅನ್ಯ ಧರ್ಮ ಹಾಗೂ ಹಿಂದೂ ಧರ್ಮದ ಜಾತಿ ಜಾತಿಗಳ ನಡುವೆ ವೈರುದ್ದ ತರುತ್ತಿದೆ ಎಂದರು.
ಇಂತಹ ಸಂಘಟನೆಗಳ ಬಗ್ಗೆ ಇಂದಿನ ಯುವಜನರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ ಅವರು, ಪ್ರತಿಯೊಂದು ಜಾತಿ, ಧರ್ಮವನ್ನು ಸಾಮರಸ್ಯದಿಂದ ಕಾಣುವ ಕಾಂಗ್ರೆಸ್ ಪಕ್ಷದ ಸೇವಾದಳವನ್ನು ಸೇರುವಂತೆ ಯುವಕರಲ್ಲಿ ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ
ಡಿ. ಶಿವಕುಮಾರ್ ಮಾತನಾಡಿ, ಇಂದು ಎಐಸಿಸಿ ಕಾಂಗ್ರೆಸ್ ಸೇವಾದಳದ ರಾಷ್ಟ್ರ ಅಧ್ಯಕ್ಷ ಲಾಲ್ ಜಿ ದೇಸಾಯಿರವರ ಆದೇಶದ ಮೇರೆಗೆ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ರಾಜ್ಯ ಅಧ್ಯಕ್ಷ ಎಂ. ರಾಮಚಂದ್ರಪ್ಪ ರವರ ಸೂಚನೆ ಮೇರೆಗೆ ಇಂದು ಧ್ವಜ ವಂದನಾ ಕಾರ್ಯಕ್ರಮವನ್ನು ಏರ್ಪಡಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಉಮಾ ತೋಟಪ್ಪ, ರಾಜ್ಯ ಕಾರ್ಯದರ್ಶಿ ಪ್ರವೀಣ್, ದಾವಣಗೆರೆ ಉತ್ತರ ವಲಯ ಅಧ್ಯಕ್ಷ ಆವರಗೆರೆ ಚಂದ್ರಪ್ಪ, ಹರಿಹರ ಬ್ಲಾಕ್ ಅಧ್ಯಕ್ಷ ಪ್ರಕಾಶ್, ಬೇತೂರು ನಾಗೇಂದ್ರಪ್ಪ, ಬಿ.ಜಿ. ಅಶೋಕ್, ಹನುಮಮ್ಮ, ನಾಗರತ್ನ, ಕೃಷ್ಣಮ್ಮ, ಮಮ್ತಾಜ್, ರತ್ನಮ್ಮ, ರೇಣುಕಮ್ಮ, ಅಕ್ಕಮ್ಮ, ನಾಗರತ್ನಮ್ಮ ಉಪಸ್ಥಿತರಿದ್ದರು.