ಮಲೇಕುಂಬಳೂರು ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ

ಮಲೇಕುಂಬಳೂರು ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ

ಹೊನ್ನಾಳಿ, ಫೆ.23- ತಾಲ್ಲೂಕು ಮಲೇಕುಂಬಳೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ಭಾನುವಾರ ಸಂಭ್ರಮದಿಂದ ಜರುಗಿತು. 

ಮುಂಜಾನೆ ಗಜೋತ್ಸವದ ನಂತರ ನಡೆದ ಬ್ರಹ್ಮ ರಥೋತ್ಸವ ಸಂದರ್ಭದಲ್ಲಿ ಶ್ರೀ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಗ್ರಾಮದ ರಾಜಬೀದಿಯಲ್ಲಿ ವಿವಿಧ ವಾದ್ಯ ಮೇಳಗಳೊಂದಿಗೆ ರಥದ ಮುಂದೆ ತರಲಾಯಿತು. ಭವ್ಯವಾಗಿ ಅಲಂಕಾರಗೊಂಡಿದ್ದ ರಥಕ್ಕೆ ಅರ್ಚಕರು ಪೂಜೆ ಸಲ್ಲಿಸಿದರು. ಗ್ರಾಮದ ಮಹಿಳೆ ಯರು ರಥಕ್ಕೆ ಮಂತ್ರಾಕ್ಷತೆ ಹಾಕಿದ ನಂತರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡುತ್ತಿದ್ದಂತೆ, ನೂರಾರು ಭಕ್ತರು ರಥ ಎಳೆದು  ಸಂಭ್ರಮಿಸಿದರು. 

error: Content is protected !!