ಕಾರ್ಮಿಕರಿಗೆ ಕಿಟ್ ವಿತರಿಸಿದ ಎಸ್ಸೆಸ್ಸೆಂ

ಕಾರ್ಮಿಕರಿಗೆ ಕಿಟ್ ವಿತರಿಸಿದ ಎಸ್ಸೆಸ್ಸೆಂ

ದಾವಣಗೆರೆ, ಅ.14- ಕಾರ್ಮಿಕರ ಕಲ್ಯಾಣಕ್ಕೆ ನಮ್ಮ ಸರ್ಕಾರವು ಹಾಗೂ ಕಾಂಗ್ರೆಸ್ ಪಕ್ಷವು ಸದಾ ಬದ್ಧವಾಗಿರುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ  ಎಸ್.ಎಸ್ ಮಲ್ಲಿಕಾರ್ಜುನ್  ತಿಳಿಸಿದರು.

ತಮ್ಮ ಗೃಹ ಕಚೇರಿಯ ಆವರಣದಲ್ಲಿ ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರು ಹಾಗೂ ವೆಲ್ಡಿಂಗ್ ಕಾರ್ಮಿಕರುಗಳಿಗೆ ಸರ್ಕಾರದ ಕಾರ್ಮಿಕ ಇಲಾಖೆಯಿಂದ ಸರಬರಾಜದ 1500 ಕಟ್ಟಡ ಕಾರ್ಮಿಕರ ಕಿಟ್ ಹಾಗೂ 800 ವೆಲ್ಟಿಂಗ್ ಕಿಟ್ ಗಳ ಪೈಕಿ 15 ಫಲಾನುಭವಿಗಳಿಗೆ ಸಾಂಕೇತಿಕವಾಗಿ ಕಿಟ್ ಗಳನ್ನು ವಿತರಣೆ ಮಾಡಿ ಸಚಿವರು ಮಾತನಾಡಿದರು. 

ಸರ್ಕಾರದಿಂದ ಕಾರ್ಮಿಕರ ಕಲ್ಯಾಣಕ್ಕೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ಸ್ಕಾಲರ್‌ಶಿಪ್‌, ವಿವಾಹ ಸಹಾಯಧನ ಸೇರಿದಂತೆ ಹಲವು ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದೆ. ಕಾರ್ಮಿಕರುಗಳ ಅಭಿವೃದ್ಧಿಗೆ‌ ಸರ್ಕಾರವು ನಿರಂತರವಾಗಿ ಹಗಲಿರುಳು ಶ್ರಮಿಸುತ್ತಿದೆ. ಕಾರ್ಮಿಕರ ಏನೇ ಸಮಸ್ಯೆಗಳು, ಕುಂದುಕೊರತೆಗಳಿದ್ದರೂ ನಿಮ್ಮೊಂದಿಗೆ ನಮ್ಮ ಕುಟುಂಬವು ಸದಾ ಬೆನ್ನೆಲುಬಾಗಿ ಇರುವುದು ಎಂದರು.

error: Content is protected !!