ಕ್ರೀಡೆಗಳಲ್ಲಿ ಸೋಲು, ಗೆಲುವಿಗಿಂತ ಆರೋಗ್ಯಕರ ಸ್ಪರ್ಧೆ ಮುಖ್ಯ : ಶಾಸಕ ದೇವೇಂದ್ರಪ್ಪ

ಕ್ರೀಡೆಗಳಲ್ಲಿ ಸೋಲು, ಗೆಲುವಿಗಿಂತ  ಆರೋಗ್ಯಕರ ಸ್ಪರ್ಧೆ ಮುಖ್ಯ : ಶಾಸಕ ದೇವೇಂದ್ರಪ್ಪ

ಜಗಳೂರು,ಆ.21- ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಸದೃಢತೆಗೆ ಸಹಕಾರಿಯಾಗಿವೆ ಎಂದು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು.

ತಾಲ್ಲೂಕಿನ ಮುಗ್ಗಿದರಾಗಿಹಳ್ಳಿ ಮುರಾ ರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ  ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ  ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕ್ರೀಡೆಗಳಲ್ಲಿ ಗೆಲುವು, ಸೋಲು ಮುಖ್ಯವಲ್ಲ. ಆರೋಗ್ಯಕರ ಸ್ಪರ್ಧೆ ಮುಖ್ಯ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ಕ್ರೀಡಾಕೂಟಗಳು ವಿದ್ಯಾರ್ಥಿಗಳ ಆಸಕ್ತಿದಾಯಕ ಕ್ಷೇತ್ರದಲ್ಲಿ  ಪ್ರತಿಭೆ ಅನಾ ವರಣಕ್ಕೆ ಸಹಕಾರಿಯಾಗಲಿವೆ. ಪ್ರತಿಯೊಬ್ಬ  ವ್ಯಕ್ತಿಗೆ  ಹಣಕ್ಕಿಂತ ಆರೋಗ್ಯವೇ ಸಂಪತ್ತು ಎಂದು ತಿಳಿಸಿದರು.ಕ್ರೀಡಾ ಕೂಟ‌ದ ಉದ್ಘಾಟನೆಗೆ ವರುಣನ ಸಿಂಚನದಿಂದ ವಿನೂತ ನವಾಗಿ ಶುಭ ಸಂಕೇತ ಸಿಕ್ಕಿದೆ. ಎರಡು ದಿನಗಳ ಕಾಲ‌ ನಡೆಯುವ ಕ್ರೀಡಾ ಕೂಟದಲ್ಲಿ ತೀರ್ಪು ಗಾರರು ಪಾರದರ್ಶಕ ತೀರ್ಪು ನೀಡಬೇಕು. ಗ್ರಾಮೀಣ ಪ್ರತಿಭೆ ಗಳು ರಾಜ್ಯಮಟ್ಟ ದಲ್ಲಿ ಹೊರಹೊಮ್ಮಿ ತಾಲ್ಲೂಕಿನ‌ ಕೀರ್ತಿ ಪತಾಕಿ ಹಾರಿಸಬೇಕು ಎಂದು ಶಾಸಕರು ಶುಭ ಹಾರೈಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ, ಗ್ರಾ.ಪಂ. ಅಧ್ಯಕ್ಷೆ  ಚಂದ್ರಮ್ಮ ಮಚ್ಚೇಂದ್ರಪ್ಪ, ಸದಸ್ಯರಾದ  ಆಜಾಮುಲ್ಲಾ, ಮುಖಂಡ ರಾದ ಬಿ.ಮಹೇಶ್ವರಪ್ಪ, ಎನ್. ಓಮಣ್ಣ, ಪಲ್ಲಾಗಟ್ಟೆ ಶೇಖರಪ್ಪ, ಪ್ರಾಂಶುಪಾಲರಾದ ಬಿ.ಎನ್.ಎಂ. ಸ್ವಾಮಿ, ಪ್ರಕಾಶ್, ಎ.ಎಲ್.ತಿಪ್ಪೇಸ್ವಾಮಿ, ಉಪನ್ಯಾಸಕರು ಇದ್ದರು.

error: Content is protected !!