ಟಿ20 ವಿಶ್ವಕಪ್‌ನಲ್ಲಿ ದಾವಣಗೆರೆಯ ಶ್ರೇಯಸ್

ಟಿ20 ವಿಶ್ವಕಪ್‌ನಲ್ಲಿ ದಾವಣಗೆರೆಯ ಶ್ರೇಯಸ್

ದಾವಣಗೆರೆ, ಜೂ. 2 – ದಾವಣಗೆರೆ ಮೂಲದ ಆಟಗಾರ ಶ್ರೇಯಸ್ ಮೋವಾ ಅವರು ಕೆನಡಾ ರಾಷ್ಟ್ರೀಯ ತಂಡದ ಮೂಲಕ ಈ ಬಾರಿಯ ಟಿ-20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದಾರೆ.

ಮೋವಾ ಅವರು ಎಂ.ಜಿ. ವಾಸುದೇವ ರೆಡ್ಡಿ ಹಾಗೂ ಎನ್.ಯಶೋಧ ಅವರ ಪುತ್ರ. ನಗರದ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವೀಧರ. 2006ರಲ್ಲಿ ದಾವಣಗೆರೆ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು. ನಂತರ ಉನ್ನತ ಶಿಕ್ಷಣಕ್ಕಾಗಿ ಕೆನಡಾಗೆ ತೆರಳಿದ್ದರು. ಅಲ್ಲಿಯೇ ಕ್ರಿಕೆಟ್ ಸಾಧನೆ ಮುಂದುವರೆಸಿದ್ದಾರೆ.

ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿರುವ ಅವರು, ಇದುವರೆಗೂ ಏಳು ಏಕದಿನ ಹಾಗೂ ಆರು ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.

2021 ರಲ್ಲಿ ಕೆನಡಾ ತಂಡಕ್ಕೆ ಆಯ್ಕೆಯಾದ ಶ್ರೇಯಸ್ ಮೋವಾ, ಅದೇ ವರ್ಷ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯವಾಡಿದ್ದರು. ಅಲ್ಲದೇ ಈ ವರ್ಷ ಏಕದಿನ ಕ್ರಿಕೆಟ್‌ಗೂ ಪಾದಾರ್ಪಣೆ ಮಾಡಿದ್ದಾರೆ. ಇದೀಗ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

error: Content is protected !!