ದುಗ್ಗಮ್ಮ ಗುಡಿ ಬಳಿ ಕರಗಲ್ಲಿಗೆ ವಿಶೇಷ ಪೂಜೆ

ದುಗ್ಗಮ್ಮ ಗುಡಿ ಬಳಿ ಕರಗಲ್ಲಿಗೆ ವಿಶೇಷ ಪೂಜೆ

ದಾವಣಗೆರೆ, ಮೇ 21 – ಉತ್ತಮ ಮಳೆಗಾಗಿ ಮಂತ್ರ ಶಾಸ್ತ್ರಗಳೊಂದಿಗೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಹತ್ತಿರವಿರುವ ಕರಗಲ್ಲಿಗೆ ಇಂದು ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಜಿಲ್ಲಾ ಮತ್ತು ತಾಲ್ಲೂಕು ಬಿತ್ತನೆ ಬೀಜ, ಕ್ರಿಮಿನಾಶಕ, ರಸಗೊಬ್ಬರ ಮಾರಾಟಗಾರರ ಸಂಘದ ವತಿಯಿಂದ ಉತ್ತಮ ಮಳೆಗಾಗಿ, ಸರ್ವರ ಒಳಿತಿಗಾಗಿ ಮಂತ್ರ ಶಾಸ್ತ್ರಗಳೊಂದಿಗೆ ಪೂಜೆಯನ್ನು ನೆರವೇರಿಸಲಾಯಿತು. 

ಈ ವೇಳೆ ಜಿಲ್ಲೆಯ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಸಹಾಯಕ ಕೃಷಿ ನಿರ್ದೇಶಕ ಶ್ರೀಧರ್ ಮೂರ್ತಿ, ರೇವಣಸಿದ್ದನ ಗೌಡ, ಶಿವಕುಮಾರ್ ಮಲ್ಲಾಡ ಮತ್ತು ಸಂಘದ ಅಧ್ಯಕ್ಷ ಆರನೇಕಲ್ ಮಂಜಣ್ಣ, ಸಂಘದ ಪದಾಧಿಕಾರಿಗಳಾದ ಸೋಮಶೇಖರ್, ಶಾಂತರಾಜ್, ಸುರೇಶ್, ಖಂಜಾಚಿ ಕಿರಣ್‌ಕುಮಾರ್ ಬಾಳೆಹೊಲದ ಮತ್ತು ತಾಲ್ಲೂಕು ಹಾಗೂ ಜಿಲ್ಲಾ ರಸಗೊಬ್ಬರ ಮಾರಾಟಗಾರರು ಉಪಸ್ಥಿತರಿದ್ದರು.

error: Content is protected !!