ವೀರೇಶ ದೊರೆಯೇ ನಿನಗಾರು ಸರಿಯೇ?

ವೀರೇಶ ದೊರೆಯೇ ನಿನಗಾರು ಸರಿಯೇ?

ದಾವಣಗೆರೆ: ತಾಲ್ಲೂಕಿನ ಆವರಗೊಳ್ಳದ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವವು ಬುಧವಾರ ಸಂಜೆ ಅಪಾರ ಜನ ಸಾಗರದ ನಡುವೆ ವಿಜೃಂಭಣೆಯಿಂದ ನೆರವೇರಿತು.

ಶ್ರೀ ವೀರಭದ್ರ ಸ್ವಾಮಿ ಹಾಗೂ ರೇವಣಸಿದ್ದೇಶ್ವರ ಸ್ವಾಮಿ ರಥೋತ್ಸವದಲ್ಲಿ ಆಸೀನರಾದ ನಂತರ ಪ್ರಥಮ ಪೂಜೆಯಾಗಿ ಬಾವುಟದ ಹರಾಜು ನಡೆಯಿತು. ಆವರಗೊಳ್ಳದ ಸತೀಶ್  ಬಾಬು ಎಂಬುವವರು 3,01,001 ರೂ.ಗಳಿಗೆ ಹರಾಜು ಮೂಲ ಝಂಡಾ ತಮ್ಮದಾಗಿಸಿಕೊಂಡರು. ನಂತರ ಶ್ರೀ ಬೀರೇಶ್ವರ ದೇವರು ರಥೋತ್ಸವದ ಪ್ರದಕ್ಷಿಣೆ ಹಾಕಿದಾಗ ರಥೋತ್ಸವ ಮುಂದೆ ಸಾಗಿತು. ಹರ ಹರ ಮಹದೇವಾ ಎಂಬ ಭಕ್ತರು ಹರ್ಷೋದ್ಘಾರ ಮುಗಿಲು ಮುಟ್ಟಿತು. ನಂತರ ಸರದಿ ಸಾಲಿನಲ್ಲಿ ನಿಂತು ಶ್ರೀ ವೀರಭದ್ರೇಶ್ವರ ಸ್ವಾಮಿ ದರ್ಶನ ಪಡೆದರು.

error: Content is protected !!