ಬೆಂಗಳೂರು, ಫೆ. 16 – ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರನ್ನು ಬೆಂಗಳೂರಿನ ರಾಜಭವನದಲ್ಲಿ ಗಣಿ ಮತ್ತು ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ನಿನ್ನೆ ಸೌಜನ್ಯ ಭೇಟಿ ಮಾಡಿದ್ದರು.
ಈ ಸಂದರ್ಭದಲ್ಲಿ ಮುಖಂಡರಾದ ಇಂದೂಧರ್, ಶ್ಯಾಗಲೆ ಜಯಣ್ಣ, ಸಚಿವರ ಆಪ್ತ ಕಾರ್ಯದರ್ಶಿ ಮಂಜುನಾಥ ಬಳ್ಳಾರಿ, ಸಚಿವರ ವಿಶೇಷ ಅಧಿಕಾರಿ ನಾಗರಾಜ್, ರಾಜೇಂದ್ರ ಭಂಡಾರಿ, ಶ್ರೀಕಾಂತ್ ಬಗರೆ ಉಪಸ್ಥಿತರಿದ್ದರು.