ಭಕ್ತಿಯ ಪರಾಕಾಷ್ಠೆ ತೋರಿದ ಶ್ರೀ ಮಡಿವಾಳ ಮಾಚಿದೇವರು : ಜಿಲ್ಲಾಧಿಕಾರಿ ಸ್ಮರಣೆ

ಭಕ್ತಿಯ ಪರಾಕಾಷ್ಠೆ ತೋರಿದ ಶ್ರೀ ಮಡಿವಾಳ ಮಾಚಿದೇವರು : ಜಿಲ್ಲಾಧಿಕಾರಿ ಸ್ಮರಣೆ

12ನೇ ಶತಮಾನ ಕ್ರಾಂತಿ ಪುರುಷರ ಯುಗ

ದಾವಣಗೆರೆ, ಫೆ.1- 12ನೇ ಶತಮಾನದಲ್ಲಿ ಹಲವಾರು ಕ್ರಾಂತಿ ಪುರುಷರ ಜನನವಾಗಿದ್ದು, ಅಂದಿನ ಶೋಷಣೆ,  ಅಸ್ಪೃಶ್ಯತೆ, ಅನಕ್ಷರಸ್ಥತೆ, ಜಾತಿಯತೆ ವಿರುದ್ಧ ತಮ್ಮ ವಚನಗಳ ಮೂಲಕ ಹೋರಾಟ ಮಾಡಿದರು. ಅವರಲ್ಲಿ ಕಾಯಕ ನಿಷ್ಠೆ, ಭಕ್ತಿಯ ಪರಾಕಾಷ್ಠೆ ತೋರಿದವರು ಶ್ರೀ ಮಡಿವಾಳ ಮಾಚಿದೇವರು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.

ಅವರು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಮಡಿವಾಳ ಮಾಚಿದೇವ ಸಂಘ, ಇವರ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಚನ ಸಂರಕ್ಷಕ, ಶ್ರೀ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶರಣರಾಗಿದ್ದ ಮಡಿವಾಳ ಮಾಚಿದೇವರು ತನ್ನ ಕುಲದ ಕಾಯಕ ಮಾಡುತ್ತಲೇ, ಸಮಾಜದ ಅನಿಷ್ಟ ಪಿಡುಗುಗಳ ವಿರುದ್ಧ ಹೋರಾಟ ಮಾಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಅಂತಹ ಶ್ರೇಷ್ಠ ವ್ಯಕ್ತಿತ್ವದ ಮಾಚಿದೇವರ ಆದರ್ಶದಲ್ಲಿ ಸಾಗುವ ಮೂಲಕ ಬದುಕಿನ ಬಗ್ಗೆ ಅವರು ಹಾಕಿಕೊಟ್ಟ ಮಾರ್ಗದರ್ಶನ, ಬೋಧನೆ ಅನುಸರಿಸಿ, ಮುಂದಿನ ಪೀಳಿಗೆಗೆ ಉತ್ತಮ ವೇದಿಕೆ ನಿರ್ಮಾಣ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.

ದಾವಣಗೆರೆ ಜಿಲ್ಲಾ ಮಡಿವಾಳ ಮಾಚಿದೇವ ಸಂಘದ ಜಿಲ್ಲಾಧ್ಯಕ್ಷ ಎಂ.ನಾಗೇಂದ್ರಪ್ಪ ಮಾತನಾಡಿ, ಶೋಷಿತ ಸಮಾಜದಲ್ಲಿ ಕಟ್ಟಕಡೆಯ ಸಮಾಜ ನಮ್ಮದು. ನಮ್ಮ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವ ಸಲುವಾಗಿ ಅನ್ನಪೂರ್ಣಮ್ಮ ವರದಿ ರಾಜ್ಯ ಸರ್ಕಾರ ಸಲ್ಲಿಕೆಯಾಗಿದ್ದು ಸರ್ಕಾರದ ಗಮನಕ್ಕೆ ತರುವಂತೆ ಮನವಿ ಮಾಡಿದರು.

 ಈ ವೇಳೆ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಜಿ.ಪಂ.ಉಪ ಕಾರ್ಯದರ್ಶಿ ಕೃಷ್ಣನಾಯ್ಕ್, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ; ಚಂದ್ರಶೇಖರ್ ಸುಂಕದ್, ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಓಂಕಾರಪ್ಪ, ಸಹ ಕಾರ್ಯದರ್ಶಿ ಆರ್.ಎನ್.ಧನಂಜಯ, ಉಪಾಧ್ಯಕ್ಷರಾದ ಪಿ.ಮಂಜುನಾಥ್, ವಿಜಯಕುಮಾರ್, ಖಜಾಂಚಿ ಸುರೇಶ್ ಕೋಗುಂಡೆ, ಪತ್ರಕರ್ತ ಎಂ.ವೈ.ಸತೀಶ್, ಎಂ.ರುದ್ರೇಶ್, ಮಂಜುನಾಥ್ ಕಕ್ಕರಗೊಳ್ಳ, ರವಿ ಚಿಕ್ಕಣ್ಣ, ಡೈಮಂಡ್ ಮಂಜುನಾಥ್, ಬಾತಿ ಶಂಕರ್, ನಾಗಮ್ಮ, ದುಗ್ಗಪ್ಪ, ಅಂಜಿನಪ್ಪ ಪೂಜಾರ್, ಗುಡ್ಡಪ್ಪ, ಬೊಮ್ಮಣ್ಣ, ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ಕಾರ್ಯದರ್ಶಿ ರವಿಚಂದ್ರ ಹಾಗೂ ಇತರರು ಇದ್ದರು.

error: Content is protected !!