ಪಂಡಿತಾರಾಧ್ಯ ಶ್ರೀಗಳಿಗೆ `ಡಾ. ಎಂ.ಎಂ ಕಲಬುರ್ಗಿ ಪ್ರಗತಿಪರ ಚಿಂತಕ’ ಪ್ರಶಸ್ತಿ

ಪಂಡಿತಾರಾಧ್ಯ ಶ್ರೀಗಳಿಗೆ `ಡಾ. ಎಂ.ಎಂ ಕಲಬುರ್ಗಿ ಪ್ರಗತಿಪರ ಚಿಂತಕ’ ಪ್ರಶಸ್ತಿ

ಸಾಣೇಹಳ್ಳಿ, ಜ. 29- ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು  ಈ ಬಾರಿಯ `ಡಾ. ಎಂ ಎಂ ಕಲಬುರ್ಗಿ ಪ್ರಗತಿಪರ ಚಿಂತಕ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 

ಬಸವ ಇಂಟರ್ ನ್ಯಾಷನಲ್ ಫೌಂಡೇಷನ್ ಸಂಸ್ಥೆ ವತಿಯಿಂದ ಶ್ರೀಗಳ ಸಾಮಾಜಿಕ ಸೇವೆ, ಮೌಢ್ಯತೆ ವಿರುದ್ಧದ ನಿರಂತರ ಹೋರಾಟಗಳನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು 25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕಹೊಂದಿದೆ.  

ಬರುವ ಫೆ.6ರಂದು ಬೆಳಗ್ಗೆ 11.30 ಕ್ಕೆ ಧಾರವಾಡ ನಗರದ ಕಲ್ಯಾಣ ನಗರ ಬಡಾವಣೆಯ `ಮಜ್ಜಿಗೆ ಪಂಚಪ್ಪ ಭವನ’ದಲ್ಲಿ  ಪ್ರಶಸ್ತಿ ಪ್ರದಾನ ಮಾಡಲಾಗುವುದು. 

ಗದುಗಿನ ತೋಂಟದಾರ್ಯ ಮಠದ ಜಗದ್ಗುರು ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ನೇತೃತ್ವದಲ್ಲಿ  ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಚಿಂತಕ ನಾಡೊಜ ಡಾ. ಗೊ ರು ಚನ್ನಬಸಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 

ಬಸವ ಅಂತರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಎಸ್ ಮಹಾದೇವಯ್ಯ  ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾವಳ್ಳಿ ಶಂಕರ್, ಶಶಿಧರ್ ಲೋಡಕರ್,  ಬಿ ಎಲ್ ಪಾಟೀಲ್ ಉಪಸ್ಥಿತರಿರುತ್ತಾರೆ. 

error: Content is protected !!